ಯಕ್ಷಗಾನದ ಮಹಾನ್ ಸಾಧಕ ಗುರು ಪ್ರಸಂಗಕರ್ತೃ ಅರ್ಥಧಾರಿ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸಂಸ್ಮರಣಾರ್ಥ ಕೊಡಲಾಗುತ್ತಿರುವ 2022ರ ಸಾಲಿನ ಕೀರಿಕ್ಕಾಡು ಪ್ರಶಸ್ತಿಗೆ ಸುಪ್ರಸಿದ್ಧ ಸ್ತ್ರೀ ಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾಯರು ಆಯ್ಕೆಯಾಗಿದ್ದಾರೆ.
ಕೋಳ್ಯೂರು ಎಂಬ ಹೆಸರಿನಿಂದಲೇ ಯಕ್ಷಗಾನ ವಲಯದಲ್ಲಿ ಮನೆಮಾತಾಗಿ ನೆಲೆನಿಂತಿರುವ ರಾಮಚಂದ್ರ ರಾಯರು ಸುದೀರ್ಘ ಕಾಲ ಶ್ರೇಷ್ಠ ಪಾತ್ರಧಾರಿಯಾಗಿ ರಂಗದಲ್ಲಿ ಮೆರೆದವರು. ಕೂಟಗಳಲ್ಲಿಯೂ ಭಾಗವಹಿಸಿದವರು.
‘90ರ ತಾರುಣ್ಯ’ದಲ್ಲಿ ಈಗಲೂ ಗರತಿಯ ವೇಷದಲ್ಲಿ ಸಾರ್ಥಕ್ಯವನ್ನು ತಂದುಕೊಡಬಲ್ಲ ಕಲಾವಂತಿಕೆಯನ್ನು ಹೊಂದಿದವರು. ಅವರ ಪರಿಪಕ್ವವೂ ಮೌಲಿಕವೂ ಆದ ಸಾಧನೆಯನ್ನು ಪರಿಗಣಿಸಿ ಕೀರಿಕ್ಕಾಡು ಪ್ರಶಸ್ತಿಯನ್ನು ಪ್ರದಾನ ಮಾಡಿ ದಿನಾಂಕ 25-12-2022 ಆದಿತ್ಯವಾರ ನಡೆಯಲಿರುವ 78ನೆಯ ವಾರ್ಷಿಕೋತ್ಸವದಂದು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು ಎಂದು ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ರಮಾನಂದ ಬನಾರಿ ಮಂಜೇಶ್ವರ, ಅಧ್ಯಕ್ಷರು, ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ) ದೇಲಂಪಾಡಿ, ಅಂಚೆ: ಪಂಜಿಕಲ್ಲು 671543, ಕಾಸರಗೋಡು ಜಿಲ್ಲೆ ಮೊಬೈಲ್: 9446297226
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ
- ಮಂಜೇಶ್ವರದ ಕುಂಜತ್ತೂರಿನಲ್ಲಿ ಆಂಬ್ಯುಲೆನ್ಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ದುರ್ಮರಣ
- ಗಂಡನೊಡನೆ ಜಗಳವಾಡಿದ ನಂತರ ಮೊಸಳೆ ತುಂಬಿದ ಕಾಲುವೆಯಲ್ಲಿ ಮಗುವನ್ನು ಎಸೆದ ತಾಯಿ – ಉತ್ತರ ಕನ್ನಡದ ಮಗು ಸಾವು