Saturday, May 4, 2024
Homeಪುಸ್ತಕ ಮಳಿಗೆಪದಯಾನ - ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಕಲಾಯಾನ 

ಪದಯಾನ – ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಕಲಾಯಾನ 

ಶ್ರೀ ಪದ್ಯಾಣ ಗಣಪತಿ ಭಟ್ಟರು ತೆಂಕುತಿಟ್ಟಿನ ಪ್ರಸಿದ್ಧ ಭಾಗವತರುಗಳಲ್ಲೊಬ್ಬರು. ಶ್ರೀ ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. ಗಾನಗಂಧರ್ವ ಖ್ಯಾತಿಯ ಶ್ರೀಯುತರು ಸುರತ್ಕಲ್ ಮೇಳದಲ್ಲಿ ಅನೇಕ ವರ್ಷಗಳ ವ್ಯವಸಾಯವನ್ನು ಮಾಡಿದವರು. ಪ್ರಸ್ತುತ ಹನುಮಗಿರಿ ಮೇಳದ ಭಾಗವತರು. ಇವರ 60ನೇ ವರ್ಷದ ಸಂದರ್ಭದಲ್ಲಿ ಮಂಗಳೂರು ಪುರಭವನದಲ್ಲಿ ಪದ್ಯಾಣ 60ರ ಸಂಭ್ರಮ ಕಾರ್ಯಕ್ರಮವು ನಡೆದಿತ್ತು. 2016ರಲ್ಲಿ ನಡೆದ ಈ ಕಾರ್ಯಕ್ರಮದ ಶುಭವಸರದಲ್ಲಿ ‘ಪದಯಾನ – ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಯಕ್ಷಯಾನ’ ಎಂಬ ಈ ಕೃತಿಯು ಪ್ರಕಟಗೊಂಡಿತ್ತು. ಇದರ ಪ್ರಕಾಶಕರು ಪದಯಾನ ಅಭಿನಂದನಾ ಸಮಿತಿ. ಲೇಖಕರೂ ಕಲಾವಿದರೂ ಅಡಿಕೆ ಪತ್ರಿಕೆಯ ಸಂಪಾದಕರೂ ಆಗಿರುವ ಶ್ರೀ ನ. ಕಾರಂತ ಪೆರಾಜೆಯವರು ಈ ಪುಸ್ತಕದ ಸಂಪಾದಕರು. ವಾಸುದೇವ ರಂಗಾ ಭಟ್, ರಾಮ ಜೋಯಿಸ ಬೆಳ್ಳಾರೆ, ಶೇಣಿ ಮುರಳಿ ಇವರನ್ನೊಳಗೊಂಡ ಸಂಪಾದಕೀಯ ಸಮಿತಿಯೂ ರೂಪೀಕರಣಗೊಂಡಿತ್ತು.

ಇದು ಒಟ್ಟು ಇನ್ನೂರ ಎಂಬತ್ತನಾಲ್ಕು ಪುಟಗಳ ಪುಸ್ತಕ. ಪದಯಾನ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ‘ಪದಯಾನಕ್ಕೊಂದು ಉಪಕ್ರಮ’ ಎಂಬ ಶೀರ್ಷಿಕೆಯಡಿ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿರುತ್ತಾರೆ. ಶ್ರೀ ನಾ. ಕಾರಂತ ಪೆರಾಜೆಯವರು ಸಂಪಾದಕೀಯ ಲೇಖನವನ್ನು ಬರೆದಿರುತ್ತಾರೆ. ಕಾರ್ಯದರ್ಶಿ ರಾಮಾ ಜೋಯಿಸರ ಅನಿಸಿಕೆಗಳನ್ನು ‘ನಮನಗಳು’ ಎಂಬ ಶೀರ್ಷಿಕೆಯಡಿ ಓದಬಹುದು. ಎಡನೀರು ಶ್ರೀಗಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಅನುಗ್ರಹ ಸಂದೇಶಗಳಿವೆ. ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ನಿತ್ಯಾನಂದ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ ಶ್ರೀ ಯು. ಗಂಗಾಧರ ಭಟ್ಟರ ಶುಭಾಶಯ ಸಂದೇಶಗಳಿವೆ. ಪದಯಾನ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ಟರು ‘ಬದುಕು ಅರೋಗ್ಯ ಭಾಗ್ಯವಾಗಿರಲಿ’ ಎಂಬ ಲೇಖನದ ಮೂಲಕ ಶುಭ ಹಾರೈಸಿರುತ್ತಾರೆ. ಪದಯಾನ  ಸಮಿತಿಯ ಪದಾಧಿಕಾರಿಗಳ ಬಣ್ಣದ ಚಿತ್ರಗಳಿದ್ದು ಬಳಿಕ ಸಂಪಾದಕ ನಾ. ಕಾರಂತರು ಪದ್ಯಾಣರ ಸಂದರ್ಶನದ ವಿವರಗಳನ್ನು ಅಕ್ಷರ ರೂಪದಲ್ಲಿ ನಿರೂಪಿಸಿ ಓದುಗರಿಗೆ ನೀಡಿರುತ್ತಾರೆ. (ಕ್ರಮ ಸಂಖ್ಯೆ ೧) ಕ್ರಮ ಸಂಖ್ಯೆ ಎರಡರಲ್ಲಿ ಪದ್ಯಾಣ ನಾರಾಯಣ ಭಟ್, ಶೀಲಾ ಗಣಪತಿ ಭಟ್, ಕಾರ್ತಿಕೇಯ ಪದ್ಯಾಣ, ಸ್ವಸ್ತಿಕ್ ಪದ್ಯಾಣ, ಬಿ. ಗೋಪಾಲಕೃಷ್ಣ ಭಟ್ಟ ಇವರುಗಳ ಮನದ ಮಾತುಗಳನ್ನು ನೀಡಲಾಗಿದೆ. ಮೂರನೇ ಕ್ರಮಸಂಖ್ಯೆಯಡಿ ಯು. ಗಂಗಾಧರ ಭಟ್ಟ , ವಿದ್ವಾನ್ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಡಾ. ಎಂ. ಪ್ರಭಾಕರ ಜೋಶಿ, ಹಿರಣ್ಯ ವೆಂಕಟೇಶ್ವರ ಭಟ್, ವೆಂಕಟ್ರಾಮ ಭಟ್ ಸುಳ್ಯ, ಡಾ. ಚಂದ್ರಶೇಖರ ದಾಮ್ಲೆ, ಪದ್ಯಾಣ ಶಂಕರನಾರಾಯಣ ಭಟ್, ಕೃಷ್ಣಪ್ರಕಾಶ ಉಳಿತ್ತಾಯ, ವಾಸುದೇವ ರಂಗಾ ಭಟ್ಟ, ಉದಯಕುಮಾರ್ ಬೆಟ್ಟ, ಕೆ. ರಾಮ ಜೋಯಿಸ, ಎಂ. ಶಾಂತಾರಾಮ ಕುಡ್ವ, ಪೂಕಳ ಲಕ್ಷ್ಮೀನಾರಾಯಣ ಭಟ್, ಡಾ. ಶ್ರೀಧರ ಭಂಡಾರಿ ಪುತ್ತೂರು, ಎಂ. ಕೆ ರಮೇಶ್ ಆಚಾರ್ಯ, ಶ್ರೀಧರ ಡಿ. ಎಸ್., ಶೇಣಿ ಮುರಳಿ, ಜಬ್ಬಾರ್ ಸಮೋ, ರವಿಚಂದ್ರ ಕನ್ನಡಿಕಟ್ಟೆ, ಕೆ. ಶಿವರಾಮ ಜೋಗಿ, ರಮೇಶ್ ಭಟ್ ಪುತ್ತೂರು, ಸುಬ್ಬನ್ ಕಲ್ಮಡ್ಕ ಎಂಬವರ ಲೇಖನಗಳಿವೆ. ಕ್ರಮ ಸಂಖ್ಯೆ 4ರಡಿಯಲ್ಲಿ ಡಾ. ವಿಶ್ವವಿನೋದ ಬನಾರಿ, ಬಿ. ಪುರುಷೋತ್ತಮ ಪೂಂಜ, ಉಡುವೆಕೋಡಿ ಸುಬ್ಬಪ್ಪಯ್ಯ, ಕೆ. ಗೋವಿಂದ ಭಟ್, ಡಾ. ರಮಾನಂದ ಬನಾರಿ, ಕೊಳ್ಯೂರು ರಾಮಚಂದ್ರ ರಾವ್, ಸೇರಾಜೆ ಸೀತಾರಾಮ ಭಟ್, ಭುಜಬಲಿ ಧರ್ಮಸ್ಥಳ, ದಿವಾಕರ ರೈ ಸಂಪಾಜೆ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರೀ, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ ಸುಣ್ಣಂಬಳ ವಿಶ್ವೇಶ್ವರ ಭಟ್, ಪ್ರಫುಲ್ಲಚಂದ್ರ ನೆಲ್ಯಾಡಿ, ತಾರಾನಾಥ ವರ್ಕಾಡಿ, ಕವಿತಾ ಕಾಮತ್, ಕೃಷ್ಣಪ್ರಕಾಶ ಬಳ್ಳಂಬೆಟ್ಟು, ಡಿ. ಮನೋಹರ ಕುಮಾರ್, ಸುಜಯಾ ಶ್ರೀಕಾಂತ್ ಸೋಮಯಾಜಿ, ಪಾವಂಜೆ ಶಿವರಾಮ ಭಟ್, ಜಿ.ಕೆ. ಭಟ್ ಸೇರಾಜೆ, ಬಿ. ಸೀತಾರಾಮ ತೋಳ್ಪಡಿತ್ತಾಯ, ಎಸ. ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಶಾಂತಾರಾಮ ಕುಡ್ವ, ಕೆ. ವರದರಾಯ ಪೈ, ಸತ್ಯನ್ ದೇರಾಜೆ, ಮಹಾಬಲ ಕಲ್ಮಡ್ಕ, ಕೊಳ್ಯೂರು ನಾರಾಯಣ ಭಟ್, ಕೆ. ಕೃಷ್ಣ ಮಧ್ಯಸ್ಥ, ಎಂ. ಎಲ್. ಭಟ್, ಪ್ರಭಾಕರ ಭಟ್ ಅಮೇರಿಕಾ, ತೋಡುಗುಳಿ ಮಹಾಬಲೇಶ್ವರ ಭಟ್, ಪ್ರೊ| ಅಮೃತ ಸೋಮೇಶ್ವರ, ಕಟೀಲು ಸಿತ್ಲ ರಂಗನಾಥ ರಾವ್, ಸದಾಶಿವ ರಾವ್ ನೆಲ್ಲಿಮಾರು, ರಾಜಕುಮಾರ್ ಪೈವಳಿಕೆ, ಡಾ. ಪಾದೆಕಲ್ಲು ವಿಷ್ಣು ಭಟ್ಟರ ಲೇಖನಗಳಿವೆ. ಶ್ರೀ ಅನಂತ ಆರ್. ಪೈ ವಿರಚಿತ ರಾಜಾಯಯಾತಿ ಪ್ರಸಂಗವನ್ನು ಕಥಾ ಸಾರಾಂಶ ಮತ್ತು ಪಾತ್ರ ಪರಿಚಯದೊಂದಿಗೆ ನೀಡಲಾಗಿದೆ. ಕೊನೆಯಲ್ಲಿ ಪದ್ಯಾಣ ಸಂಮಾನ ಸಮಿತಿಯ ಮಹನೀಯರುಗಳ ಹೆಸರನ್ನೂ ನೀಡಲಾಗಿದೆ. ಅಲ್ಲದೆ ಅನೇಕ ಸುಂದರವಾದ ಬಣ್ಣದ ಮತ್ತು ಕಪ್ಪು ಬಿಳುಪಿನ ಚಿತ್ರಗಳನ್ನು ಒಳಗೊಂಡ ಪುಸ್ತಕ ಇದು. 

RELATED ARTICLES

1 COMMENT

  1. ‘ಪದಯಾನ’ ಸಂಚಿಕೆಯ ಉತ್ತಮ ಸಿಂಹಾವಲೋಕನ. Nice summary. Thank you Ravishankar Valakkunja!

LEAVE A REPLY

Please enter your comment!
Please enter your name here

Most Popular

Recent Comments