Saturday, May 4, 2024
Homeಪುಸ್ತಕ ಮಳಿಗೆಯಕ್ಷಗಾನ ವಿಚಕ್ಷಣ -  ಕುರಿಯ ಶ್ರೀ ವಿಠಲ ಶಾಸ್ತ್ರಿಗಳ ಕುರಿತಾದ ಲೇಖನಗಳ ಸಂಗ್ರಹ 

ಯಕ್ಷಗಾನ ವಿಚಕ್ಷಣ –  ಕುರಿಯ ಶ್ರೀ ವಿಠಲ ಶಾಸ್ತ್ರಿಗಳ ಕುರಿತಾದ ಲೇಖನಗಳ ಸಂಗ್ರಹ 

ಯಕ್ಷಗಾನ ವಿಚಕ್ಷಣ’ ಎಂಬ ಈ ಪುಸ್ತಕವು ಯಕ್ಷಗಾನ ನಾಟ್ಯಾಚಾರ್ಯ, ಖ್ಯಾತ ಕಲಾವಿದ ಶ್ರೀ ಕುರಿಯ ವಿಠಲ ಶಾಸ್ತ್ರಿಗಳ ಕುರಿತಾದ ಲೇಖನಗಳ ಸಂಗ್ರಹವು. ಸಂಪಾದಕರು ಕಲಾವಿದರೂ, ಲೇಖಕರೂ, ಸಂಘಟಕರೂ ಆಗಿರುವ ಶ್ರೀ ರಾಜಗೋಪಾಲ್ ಕನ್ಯಾನ. ಪ್ರಕಾಶಕರು ವರ್ಷ ಎಂಟರ್ಪ್ರೈಸಸ್ ಬೆಂಗಳೂರು. ಈ ಪುಸ್ತಕವು 2005ರಲ್ಲಿ ಮುದ್ರಣಗೊಂಡು ಪ್ರಕಟವಾಗಿತ್ತು.

ಯಕ್ಷಗಾನ ವಿಚಕ್ಷಣ ಎಂಬ ಈ ಹೊತ್ತಗೆಯಲ್ಲಿ ಕುರಿಯ ಶ್ರೀ ವಿಠಲ ಶಾಸ್ತ್ರಿಗಳ ಕುರಿತಾಗಿ ಬರೆದ ಒಟ್ಟು ಇಪ್ಪತ್ತನಾಲ್ಕು ಲೇಖನಗಳನ್ನು ನೀಡಲಾಗಿದೆ. ಲೇಖನಗಳನ್ನು ಬರೆದವರು ರಸಿಕ ಪುತ್ತಿಗೆ, ಮೂರ್ತಿ ದೇರಾಜೆ, ಸೇರಾಜೆ ಸೀತಾರಾಮ ಭಟ್, ಕೊಳ್ಯೂರು ರಾಮಚಂದ್ರ ರಾವ್, ಪಿ.ವಿ.ಹಾಸ್ಯಗಾರ, ಕುಂಬಳೆ ಸುಂದರ ರಾವ್, ಹೊಸಹಿತ್ತಿಲು ಮಹಾಲಿಂಗ ಭಟ್, ಕೆ ಗೋವಿಂದ ಭಟ್, ಚಿನ್ಮಯ ಉಜಿರೆ, ಜಿ.ಟಿ. ನಾರಾಯಣ ರಾವ್ ಮೈಸೂರು, ಕೊಡವೂರು ಕೃಷ್ಣಮೂರ್ತಿ ಉಪಾಧ್ಯ, ದೇರಾಜೆ ಎಂ.ಸೀತಾರಾಮಯ್ಯ, ಶೇಣಿ ಗೋಪಾಲಕೃಷ್ಣ ಭಟ್ಟ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ಏರ್ಯ ಲಕ್ಷ್ಮೀನಾರಾಯಣ ಆಳ್ವ, ನೀರ್ಪಾಜೆ ಭೀಮ ಭಟ್ಟ, ಬಾ. ಸಾಮಗ ಮಲ್ಪೆ, ನೆಡ್ಲೆ ನರಸಿಂಹ ಭಟ್ಟ, ಕುಂಬಳೆ ಸುಂದರ ರಾವ್, ಪ.ಗೋಪಾಲಕೃಷ್ಣ, ಶಿವಪ್ಪ ಶೆಟ್ಟಿಗಾರ್, ಬಿ. ಗೋಪಾಲಕೃಷ್ಣ ಕುರುಪ್, ಡಾ. ಎಂ. ಬಿ. ಮರಕಿಣಿ, ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟ ಇವರುಗಳು.

ಅಲ್ಲದೆ ಸುಮಾರು ಮೂವತ್ತರಷ್ಟು ಕಪ್ಪು ಬಿಳುಪಿನ ಚಿತ್ರಗಳನ್ನೂ ನೀಡಿರುತ್ತಾರೆ. ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನವನ್ನು ಹುಟ್ಟುಹಾಕಿ ತನ್ಮೂಲಕ ವರ್ಷವೂ ಯಕ್ಷಗಾನ ಪ್ರದರ್ಶನ, ಸನ್ಮಾನ ಕಾರ್ಯಕ್ರಮಗಳನ್ನು ನಡೆಸುತ್ತಾ ಶ್ರೀ ಕುರಿಯ ಶಾಸ್ತ್ರಿಗಳ ನೆನಪುಗಳನ್ನು ಸದಾ ಹಸಿರಾಗಿಡುವಲ್ಲಿ ಶ್ರಮಿಸುತ್ತಿರುವ ಖ್ಯಾತ ಅರ್ಥಧಾರಿ, ಸಂಘಟಕ ಶ್ರೀ ಉಜಿರೆ ಅಶೋಕ ಭಟ್ಟರಿಗೆ ಈ ಪುಸ್ತಕವನ್ನು ಪ್ರೀತಿಪೂರ್ವಕ ಅರ್ಪಿಸಲಾಗಿದೆ.

ಶ್ರೀ ರಾಜಗೋಪಾಲ್ ಕನ್ಯಾನ

ಲೇಖಕ ಶ್ರೀ ರಾಜಗೋಪಾಲ ಕನ್ಯಾನ ಅವರ ಸಂಗ್ರಹ ಸಾಹಸಕ್ಕೆ ಅಭಿನಂದನೆಗಳು. ಬರಹ, ಸಂಗ್ರಹ ಕಾರ್ಯಗಳು ನಿರಂತರವಾಗಿ ಸಾಗುತ್ತಿರಲಿ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

RELATED ARTICLES

1 COMMENT

  1. ಬಹುಶಃ ಈ ಹೊತ್ತಗೆಯ ಪ್ರಥಮ ಪರಿಚಯವಿದು.
    ತಮಗೆ ಕೃತಜ್ಞ.

    ರಾಜಗೋಪಾಲ್ ಕನ್ಯಾನ.

LEAVE A REPLY

Please enter your comment!
Please enter your name here

Most Popular

Recent Comments