“ನಾನು ಕೂಡ್ಲು ಮೇಳದಲ್ಲಿದ್ದ ಸಮಯದಲ್ಲಿ ಒಮ್ಮೆ ಜೋಡಾಟ ಕಳೆದು ಮೇಳದವರು ಕೂಡ್ಲಿಗೆ ಹಿಂತಿರುಗಿದಾಗ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಾಲಯದ ಗರ್ಭಗುಡಿ ಮುಚ್ಚಿತ್ತು.
ಅರ್ಚಕರು ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರಯಲಾಗಲಿಲ್ಲ. ಮನೆಯ ಹಾಗೂ ಪರಿಸರದ ಹಿರಿಯರು ಸೇರಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಬಾಗಿಲು ತೆರೆಯಲೇ ಇಲ್ಲ.
- ಚೌಕಿಯಲ್ಲಿ ವೇಷ ಕಳಚುವಾಗಲೇ ಜೀವನ ನಾಟಕದ ವೇಷವನ್ನೂ ಕಳಚಿದ ಗಂಗಾಧರ ಪುತ್ತೂರು – ಇಲ್ಲಿದೆ ಅವರ ಕುರಿತಾದ ಸಂಪೂರ್ಣ ಮಾಹಿತಿ
- T20 ವಿಶ್ವಕಪ್ 2024 – ಭಾರತ ತಂಡದಲ್ಲಿ ರೋಹಿತ್ ಶರ್ಮ ನಾಯಕ, ಹಾರ್ದಿಕ್ ಪಾಂಡ್ಯ ಉಪನಾಯಕ, ಕೆ.ಎಲ್. ರಾಹುಲ್ ಇಲ್ಲ
- ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
- ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ
- ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿ ಪ್ರದಾನ
ಕೂಡ್ಲು ಸದಾಶಿವ ಶ್ಯಾನುಭಾಗರು ಬಹಳ ಸೌಮ್ಯದಿಂದ ‘ಕೃಷ್ಣಾ ನಾವು ಜಯಿಸಿ ಬಂದಿದ್ದೇವೆ. ಯಾಕೆ ಅಸಮಾಧಾನ?’ ಎಂದು ಹೇಳುವುದೇ ತಡ, ಒಮ್ಮೆಲೇ ಬಾಗಿಲು ತೆರೆಯಲ್ಪಟ್ಟಿತು. ಕೂಡ್ಲು ಮನೆತನದವರ ಧಾರ್ಮಿಕ ಶ್ರದ್ಧಾಭಕ್ತಿಗೆ ಇದೊಂದು ಉದಾಹರಣೆ”
(ಶ್ರೀ ಚಂದ್ರಗಿರಿ ಅಂಬು, ಖ್ಯಾತ ಬಣ್ಣದ ವೇಷಧಾರಿ,ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)