“ನಾನು ಕೂಡ್ಲು ಮೇಳದಲ್ಲಿದ್ದ ಸಮಯದಲ್ಲಿ ಒಮ್ಮೆ ಜೋಡಾಟ ಕಳೆದು ಮೇಳದವರು ಕೂಡ್ಲಿಗೆ ಹಿಂತಿರುಗಿದಾಗ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಾಲಯದ ಗರ್ಭಗುಡಿ ಮುಚ್ಚಿತ್ತು.
ಅರ್ಚಕರು ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರಯಲಾಗಲಿಲ್ಲ. ಮನೆಯ ಹಾಗೂ ಪರಿಸರದ ಹಿರಿಯರು ಸೇರಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಬಾಗಿಲು ತೆರೆಯಲೇ ಇಲ್ಲ.
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ
ಕೂಡ್ಲು ಸದಾಶಿವ ಶ್ಯಾನುಭಾಗರು ಬಹಳ ಸೌಮ್ಯದಿಂದ ‘ಕೃಷ್ಣಾ ನಾವು ಜಯಿಸಿ ಬಂದಿದ್ದೇವೆ. ಯಾಕೆ ಅಸಮಾಧಾನ?’ ಎಂದು ಹೇಳುವುದೇ ತಡ, ಒಮ್ಮೆಲೇ ಬಾಗಿಲು ತೆರೆಯಲ್ಪಟ್ಟಿತು. ಕೂಡ್ಲು ಮನೆತನದವರ ಧಾರ್ಮಿಕ ಶ್ರದ್ಧಾಭಕ್ತಿಗೆ ಇದೊಂದು ಉದಾಹರಣೆ”
(ಶ್ರೀ ಚಂದ್ರಗಿರಿ ಅಂಬು, ಖ್ಯಾತ ಬಣ್ಣದ ವೇಷಧಾರಿ,ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)