ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಕೈಗೊಂಡು ಜನ ಮನ್ನಣೆಗಳಿಸಿದ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ, ರಾಜ್ಯದ ಹಲವು ಭಾಗಗಳಲ್ಲಿ ಯಕ್ಷಗಾನ ಉತ್ಸವವನ್ನು ಕೈಗೊಂಡಿದೆ.
ಅಂತೆಯೇ ಇದೀಗ ಮಾರ್ಚ್ ತಿಂಗಳ ಯಕ್ಷಗಾನ ಉತ್ಸವವು ಸಾಸ್ತನ ಯಡಬೆಟ್ಟಿನ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ , ದಿನಾಂಕ 19-03-2022ರ ಸಂಜೆ 6.00ಕ್ಕೆ ಕರ್ಣಾರ್ಜುನ ಕಾಳಗ ಎಂಬ ಯಕ್ಷಗಾನದ ಮೂಲಕ ಸಂಪನ್ನಗೊಳ್ಳಲಿದೆ.
ಕೋಟ ವಿವೇಕ ಆಂಗ್ಲ ಮಾಧ್ಯಮದ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಾಮದೇವ ಐತಾಳ, ಉಪನ್ಯಾಸಕ ಶ್ರೀ ಸುಜಯೀಂದ್ರ ಹಂದೆ, ಯಕ್ಷಗಾನ ಪ್ರೋತ್ಸಾಹಕರಾದ ವೇದಮೂರ್ತಿ ಶ್ರೀ ವೆಂಕಪ್ಪಯ್ಯ ಭಟ್ಟ, ಯಕ್ಷಗಾನ ಕಲಾವಿದರಾದ ಡಾ| ವೈಕುಂಠ ಹೇರ್ಳೆಯವರು ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಕೃಷ್ಣಮೂರ್ತಿ ತುಂಗ, ಚಿತ್ಕಲಾ ಕೆ. ತುಂಗಾ, ಉದಯ ಹೊಸಾಳ, ರಾಘವೇಂದ್ರ ಹೆಗಡೆ, ರಾಮಕೃಷ್ಣ ಮಂದರ್ತಿ, ಸುಜಯೀಂದ್ರ ಹಂದೆ, ವಾಗ್ವಿಲಾಸ ಭಟ್ಟ, ಶಶಾಂಕ, ಶಶಿರಾಜ ಸೋಮಯಾಜಿ, ಸುಹಾಸ ಕರಬ, ಆದಿತ್ಯ ಹೊಳ್ಳ, ಸದಾಶಿವ ತುಂಗ, ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಕೆ. ಅನುಸೂಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

