ಅಮೃತ ಭಾರತಿಗೆ ಕನ್ನಡದಾರತಿಯ ಅಂಗವಾಗಿ ಈಗಾಗಲೇ ಬಹಳಷ್ಟು ಯಕ್ಷಗಾನಗಳನ್ನು ಕಲಾಪೀಠ ಕೋಟ (ರಿ) ಸಂಸ್ಥೆಯು ಆಯೋಜಿಸಿದೆ.
ಹಾಗೆಯೇ ಇದೀಗ ಮಾರ್ಚ್ ತಿಂಗಳ ಯಕ್ಷಗಾನ ಉತ್ಸವವನ್ನು ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ದಿನಾಂಕ 18-03-2023 ರ ಶನಿವಾರ ಸಂಜೆ 6.30ಕ್ಕೆ ಅತಿಕಾಯ ಮೋಕ್ಷ ಎಂಬ ಯಕ್ಷಗಾನವನ್ನು ಪ್ರದರ್ಶಿಸಲಿದೆ.
ಮುಖ್ಯ ಅಭ್ಯಾಗತರಾಗಿ, ಆಕಾಶವಾಣಿ ಮಂಗಳೂರಿನ ನಿವೃತ್ತ ಅಧಿಕಾರಿಗಳಾದ ಶ್ರೀಯುತ ಸದಾನಂದ ಹೊಳ್ಳ, ಸಾಕೇತ ಸಂಸ್ಥೆಯ ಹಿರಿಯ ಭಾಗವತರಾದ ಶ್ರೀಯುತ ಕೆ.ಜಿ. ರಾಮರಾವ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀಯುತ ಕೃಷ್ಣಮೂರ್ತಿ ತುಂಗರವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಶ್ರೀಯುತ ರಾಜಶೇಖರ ಹೆಬ್ಬಾರರವರು ಉಪಸ್ಥಿತಿಯಲ್ಲಿರುವರು.
ಶಶಿಧರ ಸೋಮಯಾಜಿ, ರವಿ ಮಡೋಡಿ, ಶಶಾಂಕ ಕಾಶಿ, ಆದಿತ್ಯ ಹೊಳ್ಳ, ಅನುಷ ಉರಾಳ, ಚಿತ್ಕಲಾ ಕೆ. ತುಂಗ, ಸುಹಾಸ ಕರಬ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕಲಾಪೀಠ ಸಂಸ್ಥೆಯ ಕಾರ್ಯದರ್ಶಿ ಶ್ರೀ. ಕೆ. ನರಸಿಂಹ ತುಂಗರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

