ಕೋವಿಡ್-19ರ ಸರಕಾರದ ನಿಯಮಾವಳಿಗಳಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಅನಿವಾರ್ಯತೆಗೆ ನಾವಿಂದು ಸಿಲುಕಿದ್ದೇವೆ. ನಾವು ಮಾತ್ರವಲ್ಲ. ಇಡೀ ಪ್ರಪಂಚವೇ ಅಂತಹದೊಂದು ಸಂದಿಗ್ಧ ಪರಿಸ್ಥಿತಿಯ ಒತ್ತಡದ ಕೈಗೊಂಬೆಯಾಗಿದೆ. ಪ್ರಪಂಚವೇ ಈ ಕಾಲಘಟ್ಟದ ಬದಲಾಗುತ್ತಿರುವ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿರುವುದು ಮಾತ್ರವಲ್ಲ, ಅದಕ್ಕೆ ಹೊಂದಿಕೊಳ್ಳುತ್ತಾ ಇದೆ. ಜನರು ನಿಧಾನವಾಗಿ ಕೋವಿಡ್ ಜೊತೆಗೆ ಬದುಕುವುದು ಹೇಗೆ ಎಂಬುವುದನ್ನು ಕಲಿತುಕೊಳ್ಳುತ್ತಾ ಇದ್ದಾರೆ.
ಮದುವೆ, ಸಭೆ, ಸಮಾರಂಭಗಳನ್ನು ನೀತಿ ನಿಯಮಗಳನ್ನು ಅನುಸರಿಸಿ ನಡೆಸಬೇಕಾದ ಪರಿಸ್ಥಿತಿಯಿದೆ. ಸಾಂಸ್ಕೃತಿಕ ಸಮಾರಂಭಗಳು ಪ್ರೇಕ್ಷಕರಿಲ್ಲದೆ ಸೊರಗಿವೆ. ಆದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರಗಳು ಇದ್ದೆ ಇರುತ್ತವೆ. ಅದರಂತೆ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು ಈಗ ಹೊಸದೊಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಕೊರೋನಾ ಹರಡುವಿಕೆಯ ಆರಂಭದ ತೀವ್ರತೆಯ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳ, ಕೇಂದ್ರ ಸಚಿವರ, ಅಧಿಕಾರಿಗಳ ಜೊತೆಗೆಲ್ಲಾ ನಡೆಸಿದ ಆನ್ಲೈನ್ ಸಂವಾದಗಳ ಪ್ರೇರಣೆಯೋ ಎಂಬಂತೆ ಪ್ರತಿಯೊಂದು ಕಾರ್ಯಕ್ರಮಗಳು ನೇರ ಪ್ರಸಾರದ ರೂಪದಲ್ಲಿ ಕಾಣಿಸಿಕೊಳ್ಳತೊಡಗಿದುವು.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!
ಅದರಂತೆ ಮುಂದಿನ ದಿನಗಳಲ್ಲಿ ವಿವಾಹ ಸಮಾರಂಭ, ಸಭೆ ಸಮಾರಂಭಗಳನ್ನೆಲ್ಲಾ ನೇರ ಪ್ರಸಾರದ ರೂಪದಲ್ಲಿ ನೋಡುವ ಅವಕಾಶಗಳು ಆಸಕ್ತರಿಗೆ ಒದಗಿ ಬಂತು. ನಿಧಾನವಾಗಿ ಈ ನೇರ ಪ್ರಸಾರದ ಸೌಲಭ್ಯ, ಸೌಭಾಗ್ಯಗಳು ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಸ್ತರಣೆಯಾಗತೊಡಗಿತು.

ಯಕ್ಷಗಾನವೂ ಹಿಂದೆ ಬೀಳಲಿಲ್ಲ. ಅಲ್ಲಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ, ಗಾನ ವೈಭವ, ಯಕ್ಷಗಾನ ಪ್ರದರ್ಶನಗಳು ನೇರ ಪ್ರಸಾರದಲ್ಲಿ ಕಾಣಿಸಿಕೊಂಡು ಕಲಾಪ್ರೇಮಿಗಳು ಮನೆಯಲ್ಲಿಯೇ ಕುಳಿತು ನೋಡುವಂತಾಯಿತು. ಫೇಸ್ಬುಕ್, ಯೂಟ್ಯೂಬ್, ಕೆಲವು ಸ್ಥಳೀಯ ಟಿವಿ ವಾಹಿನಿಗಳು ಯಕ್ಷಗಾನ ಕಾರ್ಯಕ್ರಮ, ಪ್ರದರ್ಶನಗಳನ್ನು ನೇರ ಪ್ರಸಾರ ಮಾಡುವಲ್ಲಿ ಸಂಘಟಕರ ಜೊತೆ ಕೈ ಜೋಡಿಸಿದುವು.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!
ಈಗ ಹೆಚ್ಚಿನೆಲ್ಲಾ ಯಕ್ಷಗಾನ ಪ್ರದರ್ಶನಗಳು ನೇರಪ್ರಸಾರದಲ್ಲಿ ಪ್ರೇಕ್ಷಕರಿಗೆ ನೋಡಲು ಲಭ್ಯವಾಗುತ್ತಿವೆ. ಯಕ್ಷಗಾನ ಆರಂಭವಾಗುತ್ತಿದ್ದಂತೆ ಈ ನೇರಪ್ರಸಾರದ ಅನುಕೂಲತೆಗಳೂ ಆರಂಭವಾಗಿವೆ. ಯಕ್ಷಗಾನವನ್ನು ಆರಂಭಿಸುವ ಮುನ್ನ ಅಂದರೆ ಮೇಳಗಳು ತಿರುಗಾಟಕ್ಕೆ ಹೋರಡಬೇಕಾದರೆ ಸರಕಾರವು ಕೆಲವು ಕಠಿಣ ನಿಯಮಗಳನ್ನು ನಿರ್ದೇಶಿಸಿತ್ತು. ಅದರಂತೆ ಈಗ ಮೇಳಗಳು ಕೂಡಾ ನೇರ ಪ್ರಸಾರವನ್ನು ಮಾಡುವ ಕಾಯಕವನ್ನು ಆರಂಭಿಸಿದೆ.
ಇದರಿಂದ ಮೇಳದ ಸಂಚಾಲಕರು ಹಾಗೂ ಸಂಘಟಕರು ಯಕ್ಷಗಾನದ ಅಭಿಮಾನಿಗಳಿಗೆ ಮನೆಯಲ್ಲಿಯೇ ಉತ್ಕೃಷ್ಟ ಪ್ರದರ್ಶನವನ್ನು ಆಸ್ವಾದಿಸುವ ಅವಕಾಶ ಮತ್ತು ಸೌಭಾಗ್ಯವನ್ನು ಒದಗಿಸಿ ಕೊಟ್ಟಿದ್ದಾರೆ. ಒಂದೆರಡು ತಿಂಗಳುಗಳ ಹಿಂದೆ ನಡೆದ ಯಕ್ಷಗಾನ ಕಾರ್ಯಕ್ರಮಗಳ ನೇರ ಪ್ರಸಾರಗಳಿಂದ ಆರಂಭವಾದ ಈ ನೇರ ಪ್ರಸಾರದ ಅನುಕೂಲತೆಯು ಈಗ ಮೇಳಗಳಿಗೂ ವಿಸ್ತರಿಸಿದೆ.

ಶ್ರೀ ಧರ್ಮಸ್ಥಳ ಮೇಳದಿಂದ ಆರಂಭವಾದ ಈ ನೇರ ಪ್ರಸಾರದ ಯಕ್ಷಗಾನಗಳನ್ನು ಪಾವಂಜೆ ಹಾಗೂ ಇತರ ಮೇಳಗಳೂ ಅನುಸರಿಸುತ್ತಿವೆ. ಈ ತಿಂಗಳಿನಲ್ಲಿ ಅಂದರೆ ಡಿಸೆಂಬರಿನಲ್ಲಿ ಆರಂಭವಾಗಲಿರುವ ಕಟೀಲು ಮೇಳದ ಆಟಗಳಲ್ಲಿಯೂ ಈ ನೇರ ಪ್ರಸಾರದ ಸೌಲಭ್ಯ ಇದೆಯೋ ಎಂದು ಕಾದು ನೋಡಬೇಕಷ್ಟೆ. ಆದರೆ ಈ ನೇರಪ್ರಸಾರದ ಜನಪ್ರಿಯತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನಗಳೇ ಸಾಕ್ಷಿ.
ಕೆಲವೊಂದು ಪ್ರದರ್ಶನಗಳನ್ನು ಲಕ್ಷ ಸಂಖ್ಯೆಯಲ್ಲಿ ಜನರು ವೀಕ್ಷಣೆ ಮಾಡಿದ್ದಾರೆ. ಪಾವಂಜೆ ಮೇಳವೂ ಹೆಚ್ಚಿನ ವೀಕ್ಷಕರನ್ನು ಹೊಂದಿದೆ. ಇಂತಹಾ ನೇರಪ್ರಸಾರದ ಸೌಲಭ್ಯವು ಜನರಿಗೆ ಮನೆಯಲ್ಲಿಯೇ ಕುಳಿತು ಯಕ್ಷಗಾನವನ್ನು ಆಸ್ವಾದಿಸುವ ಅನುಕೂಲವನ್ನು ಸೃಷ್ಟಿಸಿದೆ. ಆದರೆ ಮೊದಲು ಆರಂಭವಾದ ಮೇಳಗಳ ವೀಕ್ಷಣೆಯ ಸಂಖ್ಯೆ ಇದೇ ರೀತಿ ಮುಂದುವರಿಯಬಹುದು ಎಂದು ಹೇಳಲು ಅಸಾಧ್ಯ.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!
ಯಾಕೆಂದರೆ ಇನ್ನು ಆರಂಭವಾಗಲಿರುವ ಹಲವಾರು ಮೇಳಗಳ ಯಕ್ಷಗಾನ ಪ್ರದರ್ಶನಗಳಲ್ಲಿಯೂ ನೇರ ಪ್ರಸಾರದ ತಂತ್ರಗಾರಿಕೆಯನ್ನು ಅನುಸರಿಸಿದರೆ ಆಗ ವೀಕ್ಷಕರು ಪ್ರಸಂಗದ ಆಯ್ಕೆ ಮಾಡಿ ತಮ್ಮ ಮೆಚ್ಚಿನ ಪ್ರಸಂಗದ ಪ್ರದರ್ಶನಗಳನ್ನೋ ಅಥವಾ ತಮ್ಮ ಮೆಚ್ಚಿನ ಕಲಾವಿದರಿರುವ ಪ್ರದರ್ಶನಗಳನ್ನೋ ವೀಕ್ಷಿಸುವ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎಲ್ಲವನ್ನೂ ಸ್ವಲ್ಪ ಸ್ವಲ್ಪ ನೋಡಬಹುದು. ಆದರೆ ನೇರ ಪ್ರಸಾರದ ವೀಕ್ಷಣೆಯಲ್ಲಿ ರಂಗಸ್ಥಳದ ಎದುರು ಕುಳಿತು ನೋಡಿದ ರಸಾಸ್ವಾದನೆ, ಅನುಭೂತಿಗಳು ಉಂಟಾಗುವುದಿಲ್ಲ ಎಂದು ಹಲವಾರು ಯಕ್ಷಗಾನ ಪ್ರೇಮಿಗಳು ಹೇಳುತ್ತಾರೆ.
ಅದೇನೇ ಇರಲಿ, ಈ ನೇರ ಪ್ರಸಾರದ ಸೌಲಭ್ಯವನ್ನು ನೀಡುವ ತಂತ್ರಗಾರಿಕೆಯನ್ನು ಈ ತಿರುಗಾಟದಲ್ಲಿ ಮುಂದುವರಿಸಿಕೊಂಡು ಹೋಗಬಹುದು. ಅಥವಾ ಇದು ಜನಪ್ರಿಯತೆಯನ್ನು ಪಡೆದರೆ ಇನ್ನು ಮುಂದಿನ ತಿರುಗಾಟಗಳಲ್ಲಿಯೂ ಅದನ್ನು ಅಳವಡಿಸಿಕೊಳ್ಳಬಹುದು. ಆದರೆ ಇದರಿಂದ ಯಕ್ಷಗಾನ ಪ್ರದರ್ಶನಗಳಿಗೆ ಭವಿಷ್ಯದಲ್ಲಿ ಪ್ರೇಕ್ಷಕರ ನೇರ ಹಾಜರಾತಿಯ ಕೊರತೆ ಕಾಣಬಹುದೆ ಎಂಬ ಪ್ರಶ್ನೆಯು ಕಾಡುತ್ತಿದೆ. ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಲಿದೆ.

