‘ರಂಗವಿಚಿಕಿತ್ಸೆ’ ಎಂಬ ಈ ಕೃತಿಯು ವಿದ್ವಾಂಸರಾದ ಡಾ. ಕೆ.ಎಂ. ರಾಘವ ನಂಬಿಯಾರರು ಯಕ್ಷಗಾನ ಸಾಹಿತ್ಯ ಲೋಕಕ್ಕೆ ನೀಡಿದ ಒಂದು ಅಪೂರ್ವ ಕೊಡುಗೆ. ಈ ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 2018ರಲ್ಲಿ. ಪ್ರಕಾಶಕರು ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ) ಉಡುಪಿ, ಬೆಂಗಳೂರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಶ್ರೀ ರಾಘವ ನಂಬಿಯಾರರನ್ನು ಸಂದರ್ಶಿಸಿ ಅವರ ರಂಗವಿಚಾರಗಳನ್ನು ನಿರೂಪಿಸಿದವರು ಕಟೀಲು ಶ್ರೀ ಸಿತ್ಲ ರಂಗನಾಥ ರಾವ್ ಅವರು. ಈ ಕೃತಿಯ ಬಗೆಗೆ ಹಿಂದೆ ಮದ್ದಳೆಗಾರರಾದ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರು ಲೇಖನವನ್ನು ಬರೆದಿರುತ್ತಾರೆ. ಇದು ಒಟ್ಟು ತೊಂಭತ್ತು ಪುಟಗಳುಳ್ಳ ಹೊತ್ತಗೆಯು.
ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…
ಶುಭಾಕಾಂಕ್ಷೆ ಎಂಬ ಬರಹದಡಿ ಶ್ರೀ ಸಿತ್ಲ ರಂಗನಾಥ ರಾಯರೂ ‘ಅರಿಕೆ’ ಎಂಬ ಬರಹದಡಿ ಡಾ. ಕೆ.ಎಂ.ರಾಘವ ನಂಬಿಯಾರರೂ ತಮ್ಮ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ಮುನ್ನುಡಿ ಲೇಖನವನ್ನು ಬರೆದವರು ಖ್ಯಾತ ಹಿರಿಯ ಸ್ತ್ರೀ ಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು.

‘ರಂಗವಿಚಿಕಿತ್ಸೆ’ ಎಂಬ ಕೃತಿಯು ಎರಡು ವಿಭಾಗಗಳಿಂದ ಕೂಡಿದ್ದು ಈ ಉಭಯ ವಿಭಾಗಗಳಲ್ಲಿ ಡಾ.ಕೆ.ಎಂ.ರಾಘವ ನಂಬಿಯಾರರ ರಂಗವಿಚಾರಗಳನ್ನು ನಿರೂಪಿಸಿ ಸಿತ್ಲ ರಂಗನಾಥ ರಾವ್ ಅವರು ಓದುಗರಿಗೆ ನೀಡಿರುತ್ತಾರೆ. ಬಳಿಕ ಅನುಬಂಧ ಒಂದರ ಅಡಿ ಸಿತ್ಲ ರಂಗನಾಥ ರಾವ್ ಅವರು ಬರೆದ “ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ಮಾಡುವುದೇಕೆ?” ಎಂಬ ಲೇಖನವಿದೆ.
ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು?
ಅನುಬಂಧ ಎರಡರಲ್ಲಿ ಶ್ರೀ ಶ್ರೀಧರ ಡಿ.ಎಸ್, ಶ್ರೀ ರಾಜಕುಮಾರ ಪೈವಳಿಕೆ, ಶ್ರೀ ಧನಂಜಯ ನೆಲ್ಯಾಡಿ, ಶ್ರೀ ಸಮೀರ್ ದಾಮ್ಲೆ ಸುಳ್ಯ, ಇವರುಗಳು ಬರೆದ ಲೇಖನಗಳನ್ನು ನೀಡಲಾಗಿದೆ.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ

