‘ಒಡಲಿನ ಮಡಿಲು-ಯಕ್ಷತಾರೆ’ ಇದು ಬಡಗು ತಿಟ್ಟಿನ ಶ್ರೇಷ್ಠ ಕಲಾವಿದ, ಪ್ರಸಂಗಕರ್ತ, ಗುರುವಾಗಿ ಮೆರೆದ ಶ್ರೀ ಹೊಸ್ತೋಟ ಮಂಜುನಾಥ ಭಾಗವತರ ಬದುಕಿನ ಕುರಿತಾಗಿ ತಿಳಿಸುವ ಕೃತಿಯು. ಶ್ರೀಯುತರ ಜೀವಿತಾವಧಿ 1940-2019.
ಈ ಕೃತಿಯ ಪ್ರಕಾಶಕರು ‘ಅನೇಕ’, ನಾರಾಯಣ ಜೋಶಿ ಚಾರಿಟೇಬಲ್ ಟ್ರಸ್ಟ್,ಬೆಂಗಳೂರು ಈ ಸಂಸ್ಥೆಯ ಪ್ರಕಾಶ್ ಎನ್. ಜೋಶಿ ಅವರು. ಪ್ರಧಾನ ಸಂಪಾದಕಿ ಮಮತಾ.ಜಿ ಅವರು. ಶ್ರೀಮತಿ ವಿಜಯಾ ನಳಿನಿ ರಮೇಶ್ ಶಿರಸಿ, ಶ್ರೀ ಜಿ.ಎಲ್.ಹೆಗಡೆ ಕುಮಟಾ, ಶ್ರೀ ಶಂಕರ ಶಾಸ್ತ್ರಿ ಕೋಟೆಗುಡ್ಡ ಇವರನ್ನೊಳಗೊಂಡ ಸಂಪಾದಕ ಮಂಡಳಿಯ ಪರಿಶ್ರಮದಲ್ಲಿ ಈ ಪುಸ್ತಕವು 2015ರಲ್ಲಿ ಪ್ರಕಟವಾಗಿತ್ತು.

ಈ ಕೃತಿಯನ್ನು ಯಕ್ಷಗಾನದ ಮೇರು ಕಲಾವಿದ ಶ್ರೀ ಕೆ.ಶಿವರಾಮ ಹೆಗಡೆಯವರ ದಿವ್ಯ ಸ್ಮರಣೆಗೆ ಸಮರ್ಪಿಸಲಾಗಿದೆ. ಇದು ಒಟ್ಟು ನೂರಾ ಎಪ್ಪತ್ತಾರು ಪುಟಗಳನ್ನು ಹೊಂದಿದೆ. ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಅನಿಸಿಕೆಗಳನ್ನು ‘ಅರಿಕೆ’ ಎಂಬ ಬರಹದಲ್ಲಿ ತಿಳಿಸಿರುತ್ತಾರೆ. ಪ್ರಧಾನ ಸಂಪಾದಕಿ ಮಮತಾ.ಜಿ ಅವರು ‘ಅಕ್ಷರ ಕಿರೀಟ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ.

ಇದು ಭಾಗವತರ ಸಮಗ್ರ ಜೀವನಾನುಭವವನ್ನು ಕಟ್ಟಿಕೊಡುವ ಕೃತಿಯಲ್ಲ. ಬದಲಿಗೆ ಅವರ ಕೆಲವು ವಿಚಾರ, ಅನುಭವ, ಅನಿಸಿಕೆಗಳನ್ನು ಪರಿಚಯಿಸುವ ಕೃತಿ ಎಂಬ ವಿಚಾರವನ್ನು ತಮ್ಮ ಬರಹದಲ್ಲಿ ಮಮತಾ.ಜಿ ಅವರು ತಿಳಿಸಿರುತ್ತಾರೆ. ಈ ಕೃತಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಕಲಾಬದುಕಿನ ಬಹಳಷ್ಟು ವಿಚಾರಗಳನ್ನು ತಿಳಿಸಿರುತ್ತಾರೆ.
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS
ಈ ಕೃತಿಯು ಪ್ರಕಟಗೊಳ್ಳಲು ಕಾರಣರಾದ ಪ್ರಕಾಶಕರಿಗೆ, ಸಂಪಾದಕರಿಗೆ, ಸಂಪಾದಕ ಮಂಡಳಿಗೆ ಅಭಿನಂದನೆಗಳು. ಸಾಹಿತ್ಯ ಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂಬ ಆಶಯಗಳು.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ

