ಶ್ರೀ ಬಣ್ಣದ ಮಹಾಲಿಂಗ, ಖ್ಯಾತ ಬಣ್ಣದ ವೇಷಧಾರಿ(ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)
“ನಾನು ಮಂಜಪ್ಪ ಹಾಸ್ಯಗಾರರಿಂದ ನಾಟ್ಯಾದಿಗಳನ್ನು ಅಭ್ಯಾಸ ಮಾಡಿ ಮೊದಲು ಗೆಜ್ಜೆ ಕಟ್ಟಿದ್ದು ಕೊರಕ್ಕೋಡು ಕಾರ್ತ್ಯಾಯಿನಿ ಮೇಳದಲ್ಲಿ. ನಿತ್ಯವೇಷ ಮಾಡಲಾರಂಭಿಸಿದ್ದು ಕೂಡ್ಲು ಮೇಳದಲ್ಲಿ. ಅನಂತರ ಕೇವಲ ಮೂರೇ ವರ್ಷದಲ್ಲಿ ಬಣ್ಣದ ವೇಷಧಾರಿಯಾದೆ.
ಕೂಡ್ಲು ಶ್ಯಾನುಭಾಗ ಮನೆತನದವರು ಸ್ಥಾಪಿಸಿದ ಕೂಡ್ಲು ಮೇಳ ಪ್ರಸಿದ್ಧವಾದ ಮೇಳಗಳಲ್ಲೊಂದಾಗಿದ್ದು ತೆಂಕುತಿಟ್ಟಿನ ಯಕ್ಷಗಾನದ ಅತಿರಥ ಮಹಾರಥರಲ್ಲಿ ಹೆಚ್ಚಿನವರೂ ಕೂಡ್ಲು ಮೇಳದ ಮೂಲಕ ಬೆಳಕಿಗೆ ಬಂದವರು.

ಕೂಡ್ಲು ಮೇಳದಲ್ಲಿದ್ದಾಗ ನಾನು ಧರಿಸಿದ ಪಾತ್ರಗಳಿಂದ ನನಗೆ ಮನ್ನಣೆ ಲಭಿಸಿರುತ್ತದೆ. ಜನರು ಪ್ರೋತ್ಸಾಹಿಸಿದ್ದಾರೆ. ಗೌರವಿಸಿದ್ದಾರೆ. ನಾನು ಯಕ್ಷಗಾನ ವೇಷಧಾರಿ ಆದದ್ದೇ ಕೂಡ್ಲು ಮೇಳದಿಂದ ಎಂಬುದನ್ನು ಅಭಿಮಾನದಿಂದ ಹೇಳುತ್ತಿದ್ದೇನೆ. ಕೂಡ್ಲು ಮೇಳದಲ್ಲಿ ಭಾಗವತರಾಗಿದ್ದ ಪುತ್ತಿಗೆ ರಾಮಕೃಷ್ಣ ಜೋಯಿಸರ ಪ್ರೇರಣೆಯಿಂದ ಮೂರನೆಯ ಬಣ್ಣಕ್ಕೆ ಆರಂಭಿಸಿದ ನಾನು ಕೆಲವು ಕಾಲದ ನಂತರ ಎರಡನೆಯ ಬಣ್ಣವನ್ನು ನಿರ್ವಹಿಸಿದೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಆಗ ಕೂಡ್ಲು ಮೇಳದಲ್ಲಿ ಒಂದನೆಯ ಬಣ್ಣದ ವೇಷಧಾರಿಯಾಗಿದ್ದ ಸುಬ್ಬಣ್ಣ ಶೆಟ್ಟಿ ಎಂಬವರಿದ್ದರು. ಅವರು ಚೌಕಿಯಲ್ಲಿ ಬಣ್ಣದ ಬಗೆಗೆ ನನಗೆ ಮಾಹಿತಿಗಳನ್ನು ನೀಡುತ್ತಿದ್ದರು. ಮೇಳವನ್ನು ಸ್ಥಾಪಿಸಿ, ಕಲಾವಿದರನ್ನು ಸೃಷ್ಟಿಸಿ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಿದ ಕೂಡ್ಲು ಶ್ಯಾನುಭಾಗ ಮನೆತನದವರ ಸತ್ಕಾರ್ಯ ಚಿರಸ್ಮರಣೀಯವಾದುದು. ಅವರ ಬದುಕಿನ ಮಹತ್ವಗಳೆಲ್ಲ ನಮಗೆಲ್ಲಾ ದಾರಿದೀಪವಾಗಿದೆ”

