ಸಂಸ್ಕೃತದಲ್ಲಿ ‘ಸವ್ಯ’ (ನಾ) ಎಂದರೆ ಎಡಭಾಗ. ಅಪಸವ್ಯ (ನಾ) ಎಂದರೆ ದಕ್ಷಿಣ, ಬಲಭಾಗ ಎಂದರ್ಥ. ವ್ಯಾಸಭಾರತದ ವಿರಾಟಪರ್ವದ 42,43,44ನೆಯ ಅಧ್ಯಾಯಗಳಲ್ಲಿ ಉತ್ತರ ಗೋಗ್ರಹಣ ವೃತ್ತಾಂತದ ಸಂದರ್ಭ ಇತ್ಯಾದಿ ವಿವರಗಳಿವೆ. ಉತ್ತರಕುಮಾರನು ಬೃಹನ್ನಳೆಯಲ್ಲಿ ಪಾಂಡವರ ಅಸ್ತ್ರ-ಶಸ್ತ್ರ ಕುರಿತಾದ,ಅವರ ಪರಿಚಯದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾನೆ. ಅಂತೆಯೇ ಪಾರ್ಥನ ದಶನಾಮಗಳನ್ನು ಮತ್ತು ಆ ಹೆಸರುಗಳು ಬಂದ ಬಗೆಯನ್ನೂ ಪ್ರಶ್ನಿಸುತ್ತಾನೆ.
ಉ – ಕಿರೀಟೀ ನಾಮ ಕೇನಾಸಿ ಸವ್ಯಸಾಚೀ ಕಥಮ್ ಭವಾನ್ (44-20)
ಪಾ – ಉಭೌ ಮೇ ದಕ್ಷಿಣೌ ಪಾಣೀ ಗಾಂಡೀವಸ್ಯ ವಿಕರ್ಷಣೇ । ತೇನ ದೇವ ಮನುಷ್ಯೇಷು ಸವ್ಯಸಾಚೀತಿ ಮಾ ವಿದುಃ
“ಎರಡು ಕೈಗಳಲ್ಲಿ ಗಾಂಡೀವ ಧನುಸ್ಸನ್ನು ನಾನು ಕರ್ಷಿಸುವುದರಿಂದ, ದೇವತೆಗಳ ಮತ್ತು ಮನುಷ್ಯರ ಮಧ್ಯೆ ನಾನು ಸವ್ಯಸಾಚೀ ಎಂದು ತಿಳಿದಿದ್ದಾರೆ”
ಗೀತೆಯಲ್ಲಿ ‘ವಿಶ್ವರೂಪದರ್ಶನ’ವೆಂಬ ಹನ್ನೊಂದನೆಯ ಅಧ್ಯಾಯದಲ್ಲಿ ಕೃಷ್ಣನು, ‘ಮಯೈವತೇ ನಿಹತಾಃ ಪೂರ್ವಮೇವ, ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್ (11-33) ಎಂದಿದೆ.
ಕುಮಾರವ್ಯಾಸನ ;ಕರ್ಣಾಟ ಭಾರತ ಕಥಾ ಮಂಜರಿ’ಯ ವಿರಾಟಪರ್ವದಲ್ಲಿ ಉತ್ತರಕುಮಾರನ ಪ್ರಶ್ನೆ – ನಿಮ್ಮ ದಶ ನಾ । ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ – (6-45)
ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತ ವಾ
ಹನ ವಿಜಯ ಭೀಭತ್ಸು ಪಾರ್ಥ ಕಿರೀಟಿ ಮೊದಲಾದ
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ (6-46)
ಪಾರ್ಥನು ಎಡಗೈಯಿಂದ ಬಾಣವನ್ನು ಸೆಳೆದು ಬಿಡುವಾಗ ಬಲಗೈಯಲ್ಲಿ ಧನುಸ್ಸನ್ನೂ, ಬಲಗೈಯಿಂದ ಬಾಣವನ್ನು ಆಕರ್ಣಾಂತ ಸೆಳೆಯುವಾಗ ಎಡಗೈಯಲ್ಲಿ ಧನುಸ್ಸನ್ನು ಹಿಡಿದು ಅವಿಶ್ರಾಂತ ದುಡಿಯಬಲ್ಲ ಅತಿರಥ. (ವ್ಯಾಸರ ಪ್ರಕಾರ ಒಬ್ಬನೇ ವೀರ ಅಸಂಖ್ಯಾತ ಸೈನಿಕರನ್ನು ಎದುರಿಸಿ ಹೋರಾಡಬಲ್ಲವನು) ಪಾರ್ಥ ಎಡಚ; ಬಲಚ.
ಯಕ್ಷಗಾನ ಕಲಾವಿದರು ಸವ್ಯಸಾಚಿಗಳಲ್ಲ!

- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

