ರೈಲು ಮತ್ತು ಟ್ರಕ್ ಢಿಕ್ಕಿಯಾಗಿ ಅಫಘಾತ ಸಂಭವಿಸಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಹಳಿಯ ಮೇಲೆ ನಿಂತಿರುವ ಲಾರಿಗೆ ಎಕ್ಸ್ ಪ್ರೆಸ್ ರೈಲು ಬಂದು ಢಿಕ್ಕಿ ಹೊಡೆದಿದೆ.
ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲವಾದರೂ ಟ್ರಕ್ ಚಾಲಕನ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಈ ಈ ಅಫಘಾತ ನಡೆದಿದೆ.
ಭಾಲ್ಕಿ ತಾಲೂಕಿನ ಹಲಬುರ್ಗಾ ಬಳಿಯ ರೈಲು ಟ್ರ್ಯಾಕ್ ಒಂದರಲ್ಲಿ ರೈಲು ಬರುವ ವೇಳೆಗೆ ಅವಸರವಸರವಾಗಿ ಹೋಗುವ ಉದ್ದೇಶದಿಂದ ಲಾರಿ ಚಾಲಕನೊಬ್ಬ ವೇಗವಾಗಿ ಲಾರಿಯನ್ನು ಟ್ರ್ಯಾಕ್ ಮೇಲೆ ಚಲಾಯಿಸಿದ.
ಅಷ್ಟರಲ್ಲಿ ಇನ್ನೊಂದು ಬದಿಯ ಗೇಟ್ ಹಾಕಲ್ಪಟ್ಟಿತು. ಲಾರಿ ನಿಂತಿತು. ಇದರಿಂದ ಲಾರಿಯ ಹಿಂದಿನ ಭಾಗ ಟ್ರ್ಯಾಕ್ ಮೇಲೆಯೇ ಉಳಿಯಿತು. ಅಪಾಯವನ್ನು ಅರಿತ ರೈಲ್ವೆ ಸಿಬ್ಬಂದಿ ಕೂಡಲೇ ಕೆಂಪು ನಿಶಾನೆ ತೋರಿಸಿದರು. (Red Light and Flag).
ರೈಲು ನಿಧಾನಗತಿಯನ್ನು ಪಡೆದಿತ್ತಾದರೂ ಅಷ್ಟರೊಳಗೆ ಲಾರಿಯನ್ನು ಸಮೀಪಿಸಿತ್ತು. ಲಾರಿಗೆ ಅಪ್ಪಳಿಸಿ ಸ್ವಲ್ಪ ಮುಂದಕ್ಕೆ ಹೋಗಿ ರೈಲು ನಿಂತುಕೊಂಡಿತು. ದೊಡ್ಡ ಅಪಾಯವೇನೂ ಸಂಭವಿಸದಿದ್ದರೂ ನಿಲ್ಯಕ್ಷತನದ ಚಾಲನೆಗಾಗಿ ಲಾರಿ ಚಾಲಕನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

