ರೈಲು ಮತ್ತು ಟ್ರಕ್ ಢಿಕ್ಕಿಯಾಗಿ ಅಫಘಾತ ಸಂಭವಿಸಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಹಳಿಯ ಮೇಲೆ ನಿಂತಿರುವ ಲಾರಿಗೆ ಎಕ್ಸ್ ಪ್ರೆಸ್ ರೈಲು ಬಂದು ಢಿಕ್ಕಿ ಹೊಡೆದಿದೆ.
ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲವಾದರೂ ಟ್ರಕ್ ಚಾಲಕನ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಈ ಈ ಅಫಘಾತ ನಡೆದಿದೆ.
ಭಾಲ್ಕಿ ತಾಲೂಕಿನ ಹಲಬುರ್ಗಾ ಬಳಿಯ ರೈಲು ಟ್ರ್ಯಾಕ್ ಒಂದರಲ್ಲಿ ರೈಲು ಬರುವ ವೇಳೆಗೆ ಅವಸರವಸರವಾಗಿ ಹೋಗುವ ಉದ್ದೇಶದಿಂದ ಲಾರಿ ಚಾಲಕನೊಬ್ಬ ವೇಗವಾಗಿ ಲಾರಿಯನ್ನು ಟ್ರ್ಯಾಕ್ ಮೇಲೆ ಚಲಾಯಿಸಿದ.
ಅಷ್ಟರಲ್ಲಿ ಇನ್ನೊಂದು ಬದಿಯ ಗೇಟ್ ಹಾಕಲ್ಪಟ್ಟಿತು. ಲಾರಿ ನಿಂತಿತು. ಇದರಿಂದ ಲಾರಿಯ ಹಿಂದಿನ ಭಾಗ ಟ್ರ್ಯಾಕ್ ಮೇಲೆಯೇ ಉಳಿಯಿತು. ಅಪಾಯವನ್ನು ಅರಿತ ರೈಲ್ವೆ ಸಿಬ್ಬಂದಿ ಕೂಡಲೇ ಕೆಂಪು ನಿಶಾನೆ ತೋರಿಸಿದರು. (Red Light and Flag).
ರೈಲು ನಿಧಾನಗತಿಯನ್ನು ಪಡೆದಿತ್ತಾದರೂ ಅಷ್ಟರೊಳಗೆ ಲಾರಿಯನ್ನು ಸಮೀಪಿಸಿತ್ತು. ಲಾರಿಗೆ ಅಪ್ಪಳಿಸಿ ಸ್ವಲ್ಪ ಮುಂದಕ್ಕೆ ಹೋಗಿ ರೈಲು ನಿಂತುಕೊಂಡಿತು. ದೊಡ್ಡ ಅಪಾಯವೇನೂ ಸಂಭವಿಸದಿದ್ದರೂ ನಿಲ್ಯಕ್ಷತನದ ಚಾಲನೆಗಾಗಿ ಲಾರಿ ಚಾಲಕನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

