ಯಕ್ಷದೇಗುಲ ಕಾಂತಾವರ ರಿ. ಸಂಸ್ಥೆಯು ಕಳೆದ ಹತ್ತೊಂಬತ್ತು ವರ್ಷಗಳಿಂದ ಯಕ್ಷಗಾನದ ಆಟ ಕೂಟ , ಗಾನ ನಾಟ್ಯ ವೈಭವ , ಯಕ್ಷ ನಾಟ್ಯಶಿಕ್ಷಣ ಶಿಬಿರ ಹೀಗೆ ವಿವಿದ ಪ್ರಕಾರಗಳನ್ನು ಸಂಯೋಜನೆ ಮಾಡುತ್ತಾ ಬಂದಿದ್ದು ಪ್ರತಿ ವಾರ್ಷಿಕ ಸಮಾರಂಭಗಳಲ್ಲಿ ಯಕ್ಷಗಾನ ರಂಗದ ಸಾಧನಾ ಶೀಲ ಕಲಾವಿದರನ್ನು ಸನ್ಮಾನಿಸುತ್ತಾ ಬಂದಿದೆ.
ಅಂತೆಯೆ ಈಬಾರಿ ವಿಷೇಶವಾಗಿ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಧರ್ಮಸ್ಥಳದ ಮೇಳದಲ್ಲಿ ಸುಮಾರು ವರ್ಷಗಳ ಕಾಲ ಕಲಾವಿದರಾಗಿ ಖ್ಯಾತವೆತ್ತ , ರಾಜಕೀಯ ನೇತಾರ ಮಾಜಿ ಶಾಸಕ ಕುಂಬ್ಳೆ ಸುಂದರರಾವ್ ಇವರನ್ನು ಯಕ್ಷದೇಗುಲ ಸಂಸ್ಥೆಯು ಅವರ ಸ್ವಗ್ರಹಲ್ಲಿ ಕಳೆದ ಮಂಗಳವಾರ ಸಂಸ್ಥೆಯ ಅದ್ಯಕ್ಷ ಬೆಳುವಾಯಿ ಶ್ರೀಪತಿರಾವ್ ರವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. , ಧರ್ಮರಾಜ ಕಂಬಳಿ ಕಾಂತಾವರ, ರಮೇಶ ಸೆಟ್ಟಗಾರ್, ದೇವಾನಂದ್ ಭಟ್ ಬೆಳುವಾಯಿ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ.ಹಾಗೂ ಮಧುಸೂದನ್ ಭಟ್ ಉಪಸ್ತಿತರಿದ್ದರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
