ದಂಪತಿಗಳು “ಇಸ್ರೇಲ್ ನಿರ್ಮಿತ ಟೈಮ್ ಮೆಷಿನ್” ಮೂಲಕ ಹತ್ತಾರು ವೃದ್ಧರನ್ನು ಯುವಕರನ್ನಾಗಿಸುವುದಾಗಿ ಭರವಸೆ ನೀಡಿ ₹ 35 ಕೋಟಿ ವಂಚಿಸಿದ್ದಾರೆ.
ಉತ್ತರ ಪ್ರದೇಶದ ಕಾನ್ಫುರದ ರಾಜೀವ್ ಕುಮಾರ್ ದುಬೆ ಮತ್ತು ಅವರ ಪತ್ನಿ ರಶ್ಮಿ ದುಬೆ ಕಾನ್ಪುರದಲ್ಲಿ ಥೆರಪಿ ಸೆಂಟರ್ – ರಿವೈವಲ್ ವರ್ಲ್ಡ್ – ಅನ್ನು ತೆರೆದರು,
ಇಸ್ರೇಲ್ನಿಂದ ತರಲಾದ ಯಂತ್ರವನ್ನು ಬಳಸಿ 60 ವರ್ಷದ ವ್ಯಕ್ತಿಯನ್ನು 25 ವರ್ಷ ವಯಸ್ಸಿನವರನ್ನಾಗಿ ಪರಿವರ್ತಿಸುತ್ತೇವೆ ಎಂದು ಜನರನ್ನು ನಂಬಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಆಕ್ಸಿಜನ್ ಥೆರಪಿ” ಮೂಲಕ ವಯಸ್ಸಾದವರನ್ನು ಯುವಕರನ್ನಾಗಿ ಪುನಃಸ್ಥಾಪಿಸಬಹುದು ಎಂದು ಅವರು ತಮ್ಮ ಗ್ರಾಹಕರಿಗೆ ಭರವಸೆ ನೀಡಿದರು.
ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ದಂಪತಿಗಳು, ಕಲುಷಿತ ಗಾಳಿಯಿಂದಾಗಿ, ಜನರು ವೇಗವಾಗಿ ವಯಸ್ಸಾಗುತ್ತಿದ್ದಾರೆ ಮತ್ತು “ಆಮ್ಲಜನಕ ಚಿಕಿತ್ಸೆ” ತಿಂಗಳೊಳಗೆ ಅವರನ್ನು ಯುವಕ ಯುವತಿಯರನ್ನಾಗಿ ಪರಿವರ್ತಿಸುತ್ತದೆ ಎಂದು ಹೇಳುವ ಮೂಲಕ ಜನರನ್ನು ವಂಚಿಸಿದರು.
10 ಅವಧಿಗಳಿಗೆ ₹ 6,000 ಮತ್ತು ಮೂರು ವರ್ಷಗಳ ರಿಯಾಯಿತಿ ಚಿಕಿತ್ಸೆಗೆ ₹ 90,000 ಪ್ಯಾಕೇಜ್ಗಳನ್ನು ಅವರು ನೀಡಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಜಲಿ ವಿಶ್ವಕರ್ಮ ತಿಳಿಸಿದ್ದಾರೆ.
ಭಾರೀ ವಂಚನೆಗೆ ಒಳಗಾದವರಲ್ಲಿ ಒಬ್ಬರಾದ ರೇಣು ಸಿಂಗ್ ಎಂಬವರು ಈ ದಂಪತಿ ₹ 10.75 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ನೂರಾರು ಜನರಿಗೆ ₹ 35 ಕೋಟಿ ವಂಚಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಆಕೆಯ ದೂರಿನ ಮೇರೆಗೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ದಂಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದುಬೆ ದಂಪತಿಗಳು ವಿದೇಶಕ್ಕೆ ಪರಾರಿಯಾಗಿರುವ ಶಂಕೆ ಇದೆ.
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್

