Thursday, May 14, 2026
Homeಸುದ್ದಿಮಾಡಾವು (ಪುತ್ತೂರು) ಪರಿಸರದಲ್ಲಿ ಆನೆಗಳ ಹಾವಳಿ, ಬೆಳೆ ನಾಶ

ಮಾಡಾವು (ಪುತ್ತೂರು) ಪರಿಸರದಲ್ಲಿ ಆನೆಗಳ ಹಾವಳಿ, ಬೆಳೆ ನಾಶ

ಪುತ್ತೂರು ತಾಲೂಕಿನ ಮಾಡಾವು ಎಂಬಲ್ಲಿನ ಸುತ್ತಲಿನ ಪ್ರದೇಶದಲ್ಲಿ ಆನೆಗಳ ಸಂಚಾರ ಕಂಡುಬಂದಿದೆ.

ನಿನ್ನೆ (05.06.2024) ರಾತ್ರಿ ವೇಳೆಯಲ್ಲಿ ಮಾಡಾವು ಕಟ್ಟೆ ಸಮೀಪದ ಕೃಷಿಕರ ಅಡಿಕೆ ತೋಟಗಳಿಗೆ ಆನೆಗಳು ಭೇಟಿ ನೀಡಿವೆ. ಬಾಳೆಯ ಗಿಡಗಳು ನೆಲಸಮವಾಗಿರುವುದು ಕಂಡುಬಂದಿದೆ.

ಆನೆಯ ದಾಳಿಯಿಂದಾಗಿ ಅಲ್ಲಲ್ಲಿ ಬೆಳೆ ನಾಶ, ಕೃಷಿ ನಷ್ಟ ಸಂಭವಿಸಿದೆ. ಹಲವಾರು ಬಾಳೆಗಿಡಗಳು ನೆಲಸಮವಾಗಿದ್ದು ಆನೆಯ ಹೆಜ್ಜೆಯ ಗುರುತುಗಳು ಅಲ್ಲಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಇನ್ನೊಂದು ತೋಟದಲ್ಲಿ ಹಲಸಿನ ಹಣ್ಣುಗಳು ಧರಾಶಾಯಿಯಾಗಿದ್ದು ಆನೆಗಳು ಹಲಸಿನ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿವೆ. ಆನೆಗಳ ಲದ್ದಿಗಳು ಅನೇಕ ಕಡೆಗಳಲ್ಲಿ ಕಂಡುಬಂದಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments