ಇಂದು ಒಂದು ವಿಶೇಷವಾದ ತಾಳಮದ್ದಳೆ ನಡೆಯಲಿದೆ.
ಇದರ ವಿಶೇಷತೆಯೇನೆಂದರೆ ಈ ತಾಳಮದ್ದಳೆಯಲ್ಲಿ ಮೈಕ್ (ಧ್ವನಿವರ್ಧಕ) ಇರುವುದಿಲ್ಲ. ಈಗಿನ ದಿನಗಳಲ್ಲಿ ಮೈಕ್ ಇಲ್ಲದ ತಾಳಮದ್ದಲೆಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅದನ್ನು ಸಾಧ್ಯವಾಗಿಸುವ ಪ್ರಯತ್ನವೇ ಈ ತಾಳಮದ್ದಳೆಯ ಆಯೋಜನೆ.
ಮೈಕ್ ಇಲ್ಲದ ತಾಳಮದ್ದಳೆಗಳು ನಡೆಯುತ್ತಿದ್ದುದು ಕಳೆದ ಶತಮಾನದಲ್ಲಿ. ಆದರೆ ಈ ಶತಮಾನದಲ್ಲಿಯೂ ಅದನ್ನು ಸಾಧ್ಯವಾಗಿಸುವ ಪ್ರಯತ್ನ ಇಲ್ಲಿದೆ.
‘ವರ್ಣಕಲಾವಿದ ಪಣಂಬೂರು ಶ್ರೀ ರಾಘವರಾಯರ ಜನ್ಮ ಶತಮಾನೋತ್ಸವ 2022-23 ಕಾರ್ಯಕ್ರಮದ ಅಂಗವಾಗಿ ಇಂದು, 22.11.2022ನೇ ಮಂಗಳವಾರ ರಾತ್ರಿ ಘಂಟೆ 8.38ಕ್ಕೆ ಸರಿಯಾಗಿ ರಾಮಾಯಣದ ಆಯ್ದ ಭಾಗಗಳ ಪ್ರಸಂಗಗಳ ತಾಳಮದ್ದಳೆ ಕೂಟ ನಡೆಯಲಿದೆ.
ಶ್ರೀ ಮಧುಕರ ಭಗವತ್, ಶ್ರೀಮತಿ ಸುಧಾ ಮಧುಕರ, ಶ್ರೀಮತಿ ಶಾಂಭವಿ ರಾಘವ ರಾವ್ ಅವರು ಕಾರ್ಯಕ್ರಮಕ್ಕೆ ಕಲಾಭಿಮಾನಿಗಳನ್ನು ಆದರದಿಂದ ಸ್ವಾಗತಿಸಿದ್ದಾರೆ. ಪ್ರಸಂಗ, ಕಲಾವಿದರ ವಿವರಗಳಿಗೆ ಚಿತ್ರ ನೋಡಿ.
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ