ಇಂದು ಒಂದು ವಿಶೇಷವಾದ ತಾಳಮದ್ದಳೆ ನಡೆಯಲಿದೆ.

ಇದರ ವಿಶೇಷತೆಯೇನೆಂದರೆ ಈ ತಾಳಮದ್ದಳೆಯಲ್ಲಿ ಮೈಕ್ (ಧ್ವನಿವರ್ಧಕ) ಇರುವುದಿಲ್ಲ. ಈಗಿನ ದಿನಗಳಲ್ಲಿ ಮೈಕ್ ಇಲ್ಲದ ತಾಳಮದ್ದಲೆಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅದನ್ನು ಸಾಧ್ಯವಾಗಿಸುವ ಪ್ರಯತ್ನವೇ ಈ ತಾಳಮದ್ದಳೆಯ ಆಯೋಜನೆ.
ಮೈಕ್ ಇಲ್ಲದ ತಾಳಮದ್ದಳೆಗಳು ನಡೆಯುತ್ತಿದ್ದುದು ಕಳೆದ ಶತಮಾನದಲ್ಲಿ. ಆದರೆ ಈ ಶತಮಾನದಲ್ಲಿಯೂ ಅದನ್ನು ಸಾಧ್ಯವಾಗಿಸುವ ಪ್ರಯತ್ನ ಇಲ್ಲಿದೆ.
‘ವರ್ಣಕಲಾವಿದ ಪಣಂಬೂರು ಶ್ರೀ ರಾಘವರಾಯರ ಜನ್ಮ ಶತಮಾನೋತ್ಸವ 2022-23 ಕಾರ್ಯಕ್ರಮದ ಅಂಗವಾಗಿ ಇಂದು, 22.11.2022ನೇ ಮಂಗಳವಾರ ರಾತ್ರಿ ಘಂಟೆ 8.38ಕ್ಕೆ ಸರಿಯಾಗಿ ರಾಮಾಯಣದ ಆಯ್ದ ಭಾಗಗಳ ಪ್ರಸಂಗಗಳ ತಾಳಮದ್ದಳೆ ಕೂಟ ನಡೆಯಲಿದೆ.
ಶ್ರೀ ಮಧುಕರ ಭಗವತ್, ಶ್ರೀಮತಿ ಸುಧಾ ಮಧುಕರ, ಶ್ರೀಮತಿ ಶಾಂಭವಿ ರಾಘವ ರಾವ್ ಅವರು ಕಾರ್ಯಕ್ರಮಕ್ಕೆ ಕಲಾಭಿಮಾನಿಗಳನ್ನು ಆದರದಿಂದ ಸ್ವಾಗತಿಸಿದ್ದಾರೆ. ಪ್ರಸಂಗ, ಕಲಾವಿದರ ವಿವರಗಳಿಗೆ ಚಿತ್ರ ನೋಡಿ.

- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

