ಪುಣ್ಯಕ್ಷೇತ್ರ ಮಧೂರಿನ ಬಳಿಯ ಪರಕ್ಕಿಲ ದೇಗುಲದ ನಟರಾಜ ಮಂಟಪದ ಸಮ್ಮುಖದ ರಂಗ ಮಂದಿರದಲ್ಲಿ ‘ಯಕ್ಷ ಕಲಾ ಕೌಸ್ತುಭ’ ಮಧೂರ್ ಎಂಬ ನೂತನ ಬಳಗದ ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಹ್ಮಶ್ರೀ,ವೇದಮೂರ್ತಿ ತಂತ್ರಿ ಶ್ರೀ ಉಳಿಯತ್ತಾಯ ವಿಷ್ಣು ಆಸ್ರ ನೆರವೇರಿಸಿದರು.

ಜ್ಯೋತಿಷಿ ಶ್ರೀ ನಾರಾಯಣ ರಂಗಾ ಭಟ್, ಪುರೋಹಿತ ರಾಮಪ್ರಕಾಶ ತುಂಗ, ಶ್ರೀ ರಾಧಾಕೃಷ್ಣ ನಾವಡ, ಚಂಬಲ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗಾನ ಬಾಗವತ ಶ್ರೀ ವಾಸುದೇವ ಕಲ್ಲೂರಾಯರ ಭಕ್ತಿ ಭಾವದ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಬಳಗ ಹಲವು ವರ್ಷಗಳ ಕಾಲ ಸುದೀರ್ಘವಾಗಿ ಮೆರೆಯಲಿ ಎಂದು ಸಕಲರೂ ಶುಭ ಹಾರೈಸಿದರು.
ಯಕ್ಷಗಾನ ಅರ್ಥಧಾರಿ ಶ್ರೀ ವಾಸುದೇವ ರಂಗಾಭಟ್ ಸ್ವಾಗತ ಹಾಗೂ ಶುಭಗಳಿಂದ ಹಾರೈಸಿದರು.
ಯಕ್ಷ ಕಲಾ ಕೌಸ್ತುಭಾ ದ ಉದ್ಘಾಟನೆ ನಂತರ ನಡೆದ ಕಟೀಲು ಕ್ಷೇತ್ರ ಮಹಾತ್ಮೆ ಆಟ ನಡೆಯಿತು. ವಾಧಿರಾಜ ಕಲ್ಲೂರಾಯರು ಕಾರ್ಯಕ್ರಮ ನಿರೂಪಿಸಿದರು.


- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್

