Thursday, May 14, 2026
Homeಯಕ್ಷಗಾನಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ 'ಲವಣಾಸುರ ಕಾಳಗ' ತಾಳಮದ್ದಳೆ

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ‘ಲವಣಾಸುರ ಕಾಳಗ’ ತಾಳಮದ್ದಳೆ

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರಾವಣ ಮಾಸದ ತಾಳಮದ್ದಳೆಯ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸದಸ್ಯರಿಂದ ಲವಣಾಸುರ ಕಾಳಗ ತಾಳಮದ್ದಳೆ ಜರಗಿತು.

ಭಾಗವತರಾಗಿ ಡಿ.ಕೆ ಆಚಾರ್ಯ ಅಲಂಕಾರು, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಕಾರ್ತಿಕ್ ಬಳ್ಳ ಮಂಜ , ಮೋಹನ ನಾವೂರು ಅರ್ಥದಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ,ಹರೀಶ್ ಆಚಾರ್ಯ ಬಾರ್ಯ, ಜಿನೇಂದ್ರ ಜೈನ್ ಬಳ್ಳಮಂಜ ,ಪುಷ್ಪಲತಾ. ಎಂ, ತಿಲಕಾಕ್ಷ ಉಪ್ಪಿನಂಗಡಿ ಮತ್ತು ಸಂಘದ ಪೋಷಕರಾದ ಉಮೇಶ್ ಶೆಣೈ ರಾಮನಗರ ಭಾಗವಹಿಸಿದ್ದರು.

ಶ್ರಾವಣ ಮಾಸದ ತಾಳಮದ್ದಲೆ ಸೇವೆಯ ಪ್ರಾಯೋಜಕರಾಗಿ ಉಮೇಶ್ ಶೆಣೈ ಅವರು ದೇವಳದ ಸಮಿತಿಗೆ ದೇಣಿಗೆಯನ್ನು ನೀಡಿದರು.

ಸಮಿತಿಯ ಕಾರ್ಯದರ್ಶಿ ನಾಗೇಂದ್ರ ಪೈ ಸ್ವಾಗತಿಸಿ ವಂದಿಸಿದರು.



RELATED ARTICLES

LEAVE A REPLY

Please enter your comment!
Please enter your name here

Most Popular

Recent Comments