ಆನೆ ಮತ್ತು ಮರಿಯಾನೆಗಳು ಕಬ್ಬು ಸಾಗಿಸುವ ಲಾರಿಯನ್ನು ತಡೆದು ನಿಲ್ಲಿಸಿದ ವೀಡಿಯೊ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ಆನೆಗಳು ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸುತ್ತವೆ. ಆಮೇಲೆ ಅದರಲ್ಲಿ ತುಂಬಿರುವ ಕಬ್ಬಿನ ಕೋಲುಗಳಿಗಾಗಿ ಆಗ್ರಹಿಸುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು.
ಲಾರಿಯಲ್ಲಿದ್ದ ಕಬ್ಬುಗಳ ರಾಶಿಯ ಮಾಲಕನು ಕಬ್ಬಿನ ಕಟ್ಟುಗಳನ್ನು ಆನೆಯತ್ತ ರಸ್ತೆಗೆ ಎಸೆಯುತ್ತಾನೆ. ಈ ವೀಡಿಯೊವನ್ನು ಪ್ರವೀಣ್ ಕಾಸ್ವಾನ್ (ಐಎಫ್ಎಸ್, ಭಾರತೀಯ ಅರಣ್ಯ ಸೇವೆ) ಎಂಬ ಅರಣ್ಯಾಧಿಕಾರಿಯೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ,
ಕೊನೆಯಲ್ಲಿ ಅವರು ” ನಾನು ತಿಳಿಸಲು ಬಯಸುವ ಸಂದೇಶ. ಇದು ನೋಡಲು ಸುಂದರವಾಗಿರುತ್ತದೆ ಆದರೆ ಕಾಡು ಪ್ರಾಣಿಗಳಿಗೆ ಆಹಾರವನ್ನು ನೀಡುವುದು ಸರಿಯಲ್ಲ. ಸಹಾನುಭೂತಿ ಆಧಾರಿತ ಸಂರಕ್ಷಣೆ ವನ್ಯಜೀವಿಗಳ ಶತ್ರು. ಅವರು ಸುಲಭ ಮತ್ತು ಮಸಾಲೆಯುಕ್ತ ಆಹಾರಕ್ಕೆ ಒಗ್ಗಿಕೊಳ್ಳುತ್ತಾರೆ. ಪರಿಣಾಮವಾಗಿ ರಸ್ತೆಗಳ ಸುತ್ತಲೂ ಮತ್ತು ಅವರ ಆವಾಸಸ್ಥಾನದ ಹೊರಗೆ ತಿರುಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯ ಅಪಘಾತಗಳು ಈ ರೀತಿಯಲ್ಲಿ ಸಂಭವಿಸುತ್ತವೆ. ಅವುಗಳು ಕಾಡಿನಲ್ಲೇ ಉಳಿಯಲಿ” ಎಂಬ ಎಚ್ಚರಿಕೆಯ ಸಂದೇಶವನ್ನು ಬರೆದಿದ್ದಾರೆ.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

