2021-22ನೆ ಸಾಲಿನ ಅಂತಾ ರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಧನೆಗಳನ್ನು ಮಾಡಿದ್ದಾರೆ.
8ನೇ ತರಗತಿಯ ಚಿನ್ಮಯಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತು ಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಅವರು ಅಂತಾ ರಾಷ್ಟ್ರೀಯ ಇಂಗ್ಲಿಷ್, ಸಾಮಾನ್ಯಜ್ಞಾನ, ಗಣಿತ, ಸಮಾಜ ಅಧ್ಯಯನ ಹಾಗೂ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ 3 ಚಿನ್ನ, 2 ಬೆಳ್ಳಿಯ ಪದಕಗಳನ್ನು ಪಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿರುವ ಅತ್ಯುತ್ತ ರ್ಯಾಂಕ್ಗಾಗಿ ನೀಡಲ್ಪಡುವ ವಿಶೇಷ ಬಹುಮಾನ ಗಿಫ್ಟ್ ವೋಚರ್ ಮತ್ತು ಅಕಾಡೆಮಿಕ್ ಎಕ್ಸ್ಲೆನ್ಸಿ ಅವಾರ್ಡ್ ಗಳನ್ನು ಪಡೆದಿರುತ್ತಾರೆ.
5ನೇ ತರಗತಿಯ ನೇಶ ಕಾವ್ಯ ಮುಗೇರ್(ರಮೇಶ್ ಮುಗೇರ್ ರಾವ್ ಮತ್ತು ಕೃಪಾರಾಣಿ.ಎಸ್ ದಂಪತಿಗಳ ಪುತ್ರಿ) , 3ನೇ ತರಗತಿಯ ಶಶಾಂಕ್.ಟಿ.ಆರ್(ಟಿ.ಎಸ್.ರಘುರಾಮ ಮತ್ತು ದೀಪ್ತಿ.ಆರ್.ಭಟ್ ದಂಪತಿಗಳ ಪುತ್ರ), 7ನೇ ತರಗತಿಯ ಯತಿನ್ ಬಿ.ಎಸ್(ಶೇಷಪ್ಪಗೌಡ.ಎಚ್ ಮತ್ತು ಹೇಮಾವತಿ.ಜಿ ದಂಪತಿಗಳ ಪುತ್ರಿ), 2ನೇ ತರಗತಿಯ ತನ್ವಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತುಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಇವರುಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್ಗಳನ್ನು ಪಡೆದಿರುತ್ತಾರೆ.
ಕಳೆದ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಾದ ಆತ್ಮೀಯ.ಎಂ.ಕಶ್ಯಪ್, ಶಿವಚೇತನ್ ಹಳಮನಿ, ಅಭೀಜ್ಞ.ಆರ್, ರಾಮಮೋಹನ ಮತ್ತು ಪಂಕಜ್ ಭಟ್ ಇವರು ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್ಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- ಸಹಪಾಠಿಯೊಬ್ಬನ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ನಿಂದ ಬೇಸತ್ತು ಯುವತಿ ಆತ್ಮಹತ್ಯೆ
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ

