ತೆಂಗಿನ ನಾಡಲ್ಲಿ ಭೀಕರ ಮಳೆಯ ಅಬ್ಬರ ಜೋರಾಗಿದೆ. ಪ್ರವಾಹವೂ ಜೋರಾಗಿದೆ. ಹೊಳೆ, ತೋಡು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೇಳಿ ಕೇಳಿ ನಮ್ಮದು ತೆಂಗಿನ ನಾಡು. ತೆಂಗು ಕೃಷಿಗೆ ನಮ್ಮ ಕರಾವಳಿ ನಾಡು ಪ್ರಖ್ಯಾತಿಯನ್ನು ಪಡೆದಿದೆ.
ನದಿ, ಹೊಳೆಗಳ ಇಕ್ಕೆಲಗಳಲ್ಲಿಯೂ ತೆಂಗಿನ ಮರಗಳ ಸಾಲುಗಳನ್ನೇ ಕಾಣಬಹುದು. ಅಂತಹಾ ತೆಂಗಿನ ಮರಗಳಲ್ಲಿ ಒಣಗಿದ ರಭಸಕ್ಕೆ ನದಿ ಹೊಳೆಗಳ ನೀರಿಗೆ ಬೀಳುತ್ತವೆ.
ತೇಲಿ ಹೋಗುತ್ತಿರುವ ತೆಂಗಿನಕಾಯಿಗಳನ್ನು ಹಿಡಿಯಲೆಂದೇ ಈ ಮಳೆಗಾಲದಲ್ಲಿ ಜನರ ಒಂದು ಗುಂಪು ತಯಾರಾಗಿ ನಿಂತಿರುತ್ತದೆ. ಅವರು ಈ ಸಮಯದಲ್ಲಿ ಇದೇ ಕೆಲಸವನ್ನು ಮಾಡುತ್ತಾರೆ. ದಿನವೊಂದಕ್ಕೆ ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳನ್ನು ಸಂಗ್ರಹಿಸುತ್ತಾರೆ.
ಉದ್ದವಾದ ಕೋಲೊಂದಕ್ಕೆ (ಕೊಕ್ಕೆ) ಬಲೆಯೊಂದನ್ನು (ನೆಟ್) ಕಟ್ಟಿ ಸೇತುವೆಯ ಮೇಲೆ ನಿಂತು ತೆಂಗಿನಕಾಯಿ ಹಿಡಿಯುವ ದೃಶ್ಯ ನೋಡಲೂ ಮನೋಹರ. ಕೆಳಗಿನ ಎರಡು ವೀಡಿಯೋಗಳನ್ನು ನೋಡಿ. ವಾಟ್ಸಾಪ್ ನಲ್ಲಿ ಬಂದಿರುವ ವೀಡಿಯೋಗಳನ್ನು ಹಾಗೆಯೇ ಇಲ್ಲಿ ಕೊಡಲಾಗಿದೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

