ತೆಂಗಿನ ನಾಡಲ್ಲಿ ಭೀಕರ ಮಳೆಯ ಅಬ್ಬರ ಜೋರಾಗಿದೆ. ಪ್ರವಾಹವೂ ಜೋರಾಗಿದೆ. ಹೊಳೆ, ತೋಡು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೇಳಿ ಕೇಳಿ ನಮ್ಮದು ತೆಂಗಿನ ನಾಡು. ತೆಂಗು ಕೃಷಿಗೆ ನಮ್ಮ ಕರಾವಳಿ ನಾಡು ಪ್ರಖ್ಯಾತಿಯನ್ನು ಪಡೆದಿದೆ.
ನದಿ, ಹೊಳೆಗಳ ಇಕ್ಕೆಲಗಳಲ್ಲಿಯೂ ತೆಂಗಿನ ಮರಗಳ ಸಾಲುಗಳನ್ನೇ ಕಾಣಬಹುದು. ಅಂತಹಾ ತೆಂಗಿನ ಮರಗಳಲ್ಲಿ ಒಣಗಿದ ರಭಸಕ್ಕೆ ನದಿ ಹೊಳೆಗಳ ನೀರಿಗೆ ಬೀಳುತ್ತವೆ.
ತೇಲಿ ಹೋಗುತ್ತಿರುವ ತೆಂಗಿನಕಾಯಿಗಳನ್ನು ಹಿಡಿಯಲೆಂದೇ ಈ ಮಳೆಗಾಲದಲ್ಲಿ ಜನರ ಒಂದು ಗುಂಪು ತಯಾರಾಗಿ ನಿಂತಿರುತ್ತದೆ. ಅವರು ಈ ಸಮಯದಲ್ಲಿ ಇದೇ ಕೆಲಸವನ್ನು ಮಾಡುತ್ತಾರೆ. ದಿನವೊಂದಕ್ಕೆ ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳನ್ನು ಸಂಗ್ರಹಿಸುತ್ತಾರೆ.
ಉದ್ದವಾದ ಕೋಲೊಂದಕ್ಕೆ (ಕೊಕ್ಕೆ) ಬಲೆಯೊಂದನ್ನು (ನೆಟ್) ಕಟ್ಟಿ ಸೇತುವೆಯ ಮೇಲೆ ನಿಂತು ತೆಂಗಿನಕಾಯಿ ಹಿಡಿಯುವ ದೃಶ್ಯ ನೋಡಲೂ ಮನೋಹರ. ಕೆಳಗಿನ ಎರಡು ವೀಡಿಯೋಗಳನ್ನು ನೋಡಿ. ವಾಟ್ಸಾಪ್ ನಲ್ಲಿ ಬಂದಿರುವ ವೀಡಿಯೋಗಳನ್ನು ಹಾಗೆಯೇ ಇಲ್ಲಿ ಕೊಡಲಾಗಿದೆ.
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ
- ಮಂಜೇಶ್ವರದ ಕುಂಜತ್ತೂರಿನಲ್ಲಿ ಆಂಬ್ಯುಲೆನ್ಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ದುರ್ಮರಣ