ಶ್ರದ್ಧಾಂಜಲಿ ಗೀತೆ (ಭಾಮಿನಿ ಷಟ್ಪದಿ)
ಭಾಗವತ ಕುಲತಿಲಕ ಜನಮನ | ಸಾಗರದಿ ಪದ್ಯಾಣ ಮನೆತನ | ವಾಗಿ ನೆಲೆಸಿದೆ ಯಕ್ಷಗಾನಾಂಬಿಕೆಯ ಪದತಳದಿ || ಮಾಗಿದತ್ಯನುಭಾವಿ ಗಣಪತಿ | ರಾಗ ಋಷಿವರ ಯಕ್ಷ ಗುಣಪತಿ | ತ್ಯಾಗ ಗಣಮಣಿಗರ್ಪಣೆಯು ಶ್ರದ್ಧಾಂಜಲಿಯ ಗೀತೆ || ೧ ||
ಯಕ್ಷರಂಗಸ್ಥಳವ ಅವಿರತ | ರಕ್ಷಿಸುತ ಪೂಜಿಸುತ ಮೆರೆಸಿದ | ದಕ್ಷ ಪ್ರತಿಭಾ ಪ್ರಭೆಯು ಶ್ರೀ ಪದ್ಯಾಣ ಗಣಪಣ್ಣ || ಲಕ್ಷಣಾನ್ವಿತ ಯಕ್ಷಸಂಪದ | ಲಕ್ಷ್ಮಿನಾರಾಯಣನ ಪದದೊಳು | ಐಕ್ಯವಾದುದು ಕೀರ್ತಿ ನಾದವನುಳಿಸಿ ಜಗದೊಳಗೆ || ೨ ||
ಬ್ರಹ್ಮ ಬರೆದಾಯುಷ್ಯ ತಿದ್ದುವ | ಕರ್ಮಭೂಮಿಯ ವೈದ್ಯನಾರವ | ನಿರ್ಮಲಾಂತಃಕರಣ ಜೀವಿತದವಧಿಗಳಿವಿಲ್ಲ || ಧರ್ಮಕರ್ಮದಿ ಯಕ್ಷಗಾನವ | ನಿರ್ಮಲದಿ ಪೋಷಿಸಿದ ಭಗವತ | ತಮ್ಮನಾತ್ಮಕೆ ಶಾಂತಿ ನೆಮ್ಮದಿ ಕರುಣಿಸಲಿ ಹರಿಯು || ೩ ||
ಪಾಡಿರುವ ಪದ ಪದ್ಯ ಮನದೊಳ | ಗಾಡಿ ಕುಣಿಕುಣಿದಾಡಿಸುತ್ತಿದೆ | ಗಾಢ ಹೃದಯಸ್ಪರ್ಶಿ ಬಂಧವು ಕಳಚದೆಂದಿಗದು || ಕೂಡಿರಲಿ ಮುನಿಪುರದ ಶ್ರೀಹರಿ | ನಾಡ ಸಂಸ್ಕೃತಿ ಯಕ್ಷಗಾನವ | ತೀಡಿ ತಿದ್ದುತ ಬೆಳಗಿಸಲಿ ಸ್ಥಿರವಾಗಿ ಧರೆಯೊಳಗೆ || ೪ ||

ವಿಶ್ವವಿನೋದ ಬನಾರಿ
13-10-2021
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

