ಶ್ರದ್ಧಾಂಜಲಿ ಗೀತೆ (ಭಾಮಿನಿ ಷಟ್ಪದಿ)
ಭಾಗವತ ಕುಲತಿಲಕ ಜನಮನ | ಸಾಗರದಿ ಪದ್ಯಾಣ ಮನೆತನ | ವಾಗಿ ನೆಲೆಸಿದೆ ಯಕ್ಷಗಾನಾಂಬಿಕೆಯ ಪದತಳದಿ || ಮಾಗಿದತ್ಯನುಭಾವಿ ಗಣಪತಿ | ರಾಗ ಋಷಿವರ ಯಕ್ಷ ಗುಣಪತಿ | ತ್ಯಾಗ ಗಣಮಣಿಗರ್ಪಣೆಯು ಶ್ರದ್ಧಾಂಜಲಿಯ ಗೀತೆ || ೧ ||
ಯಕ್ಷರಂಗಸ್ಥಳವ ಅವಿರತ | ರಕ್ಷಿಸುತ ಪೂಜಿಸುತ ಮೆರೆಸಿದ | ದಕ್ಷ ಪ್ರತಿಭಾ ಪ್ರಭೆಯು ಶ್ರೀ ಪದ್ಯಾಣ ಗಣಪಣ್ಣ || ಲಕ್ಷಣಾನ್ವಿತ ಯಕ್ಷಸಂಪದ | ಲಕ್ಷ್ಮಿನಾರಾಯಣನ ಪದದೊಳು | ಐಕ್ಯವಾದುದು ಕೀರ್ತಿ ನಾದವನುಳಿಸಿ ಜಗದೊಳಗೆ || ೨ ||
ಬ್ರಹ್ಮ ಬರೆದಾಯುಷ್ಯ ತಿದ್ದುವ | ಕರ್ಮಭೂಮಿಯ ವೈದ್ಯನಾರವ | ನಿರ್ಮಲಾಂತಃಕರಣ ಜೀವಿತದವಧಿಗಳಿವಿಲ್ಲ || ಧರ್ಮಕರ್ಮದಿ ಯಕ್ಷಗಾನವ | ನಿರ್ಮಲದಿ ಪೋಷಿಸಿದ ಭಗವತ | ತಮ್ಮನಾತ್ಮಕೆ ಶಾಂತಿ ನೆಮ್ಮದಿ ಕರುಣಿಸಲಿ ಹರಿಯು || ೩ ||
ಪಾಡಿರುವ ಪದ ಪದ್ಯ ಮನದೊಳ | ಗಾಡಿ ಕುಣಿಕುಣಿದಾಡಿಸುತ್ತಿದೆ | ಗಾಢ ಹೃದಯಸ್ಪರ್ಶಿ ಬಂಧವು ಕಳಚದೆಂದಿಗದು || ಕೂಡಿರಲಿ ಮುನಿಪುರದ ಶ್ರೀಹರಿ | ನಾಡ ಸಂಸ್ಕೃತಿ ಯಕ್ಷಗಾನವ | ತೀಡಿ ತಿದ್ದುತ ಬೆಳಗಿಸಲಿ ಸ್ಥಿರವಾಗಿ ಧರೆಯೊಳಗೆ || ೪ ||
ವಿಶ್ವವಿನೋದ ಬನಾರಿ
13-10-2021
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ