ಇದೊಂದು ಪದಬಂಧ. ಯಕ್ಷಗಾನದ ಜ್ಞಾನವನ್ನು ವೃದ್ಧಿಸಲು ಸಹಕಾರಿ. ಅದಕ್ಕಾಗಿ ಈ ಸಣ್ಣ ಪ್ರಯತ್ನ. ಈ ಪದಬಂಧವನ್ನು ತುಂಬಿಸಿ ಅಥವಾ ಸರಿಯಾದ ಉತ್ತರವನ್ನು ಶಬ್ದಗಳ ರೂಪದಲ್ಲಿ ಬರೆದು ನಮ್ಮ ವಾಟ್ಸಾಪ್ ಸಂಖ್ಯೆಗೆ ಎರಡು ದಿನಗಳೊಳಗೆ ಕಳುಹಿಸಿ. ಸರಿಯಾದ ಉತ್ತರವನ್ನು ಬರೆದ ಎಲ್ಲರ ಹೆಸರುಗಳನ್ನೂ ನಮ್ಮ ಮುಂದಿನ ಪದಬಂಧ ಲೇಖನದಲ್ಲಿ ಪ್ರಕಟಿಸಲಾಗುವುದು. ನಮ್ಮ ವಾಟ್ಸಾಪ್ ಸಂಖ್ಯೆ 9535618305
ಎಡದಿಂದ ಬಲಕ್ಕೆ:
1. ಯಕ್ಷಗಾನ ಪ್ರದರ್ಶನದ ಪ್ರಸಂಗ ಪ್ರದರ್ಶನಕ್ಕೆ ಮೊದಲು ಇದನ್ನು ಪ್ರದರ್ಶಿಸಲಾಗುತ್ತದೆ(4)
3. ಅಪ್ಪ,ಮಗ,ಮೊಮ್ಮಗ, ಮರಿಮಗ ಹೀಗೆ ಎಲ್ಲರೂ ಯಕ್ಷಗಾನದಲ್ಲಿ ತೊಡಗಿಸಿಕೊಂಡ ಮನೆಯ ಸಮೀಪ ಕೊಳವೂ ಇದೆಯಲ್ಲ! (4)
5. ರಾಮನ ಕೈಯ ಆಯುಧ (3)
7. ‘ನನ್ನ ಲಂಕಾಧೀಶ್ವರ’ ಎಂದು ಇಂಗ್ಲೀಷಿನಲ್ಲಿ ಹೇಳಿದರೆ ಹನುಮಂತನಿಗೆ ಕೋಪ ಬಂದೀತು! (4)
8. ಇವನು ಸತ್ತಾಗ ರಾವಣನು ಕ್ಲೇಶ ತಾಳಿದನು (4)
11. ಪ್ರಸಂಗ ಆರಂಭವಾಗುವ ಮೊದಲಿನ ವೇಷಗಳಲ್ಲಿ ಇದೂ ಒಂದು. ಚಿತ್ರವಿಚಿತ್ರ ಉಡುಪು ಧರಿಸುವ ಜನರನ್ನು ಕೂಡಾ ಹೀಗೆ ಕರೆಯುತ್ತಾರೆ! (3)
12. ಇದೂ ಜೊತೆಗಿದ್ದರೆ ಗಾಯನ ಕಳೆಗಟ್ಟುತ್ತದೆ. (3)
13. ಆಂಜನೇಯನನ್ನು ಆತನ ವಿರೋಧಿಗಳು ಹೀಗೆ ಕರೆಯಬಹುದು – ಬಲದಿಂದ ಎಡಕ್ಕೆ (2)
16. ತೆಂಕುತಿಟ್ಟು ಯಕ್ಷಗಾನದಲ್ಲಿ ಏರುಪದ್ಯಕ್ಕೆ ಹಾರುವುದನ್ನು ಹೀಗೂ ಹೇಳಬಹುದಲ್ಲ ! (2)
17. ದೇವೇಂದ್ರನ ಮತ್ತೊಂದು ಹೆಸರು (4)
18. ಯಕ್ಷಗಾನದ ಜನಕ (4)
19. ಇವನು ಯೋಜನಗಂಧಿಯನ್ನು ಮೋಹಿಸದಿದ್ದರೆ ಮಹಾಭಾರತ ನಡೆಯುತ್ತಿತ್ತೇ? (3)
ಮೇಲಿನಿಂದ ಕೆಳಕ್ಕೆ:
2. ಪಾಂಡವರ ಅಜ್ಞಾತವಾಸದ ಕತೆಯನ್ನು ಮಹಾಭಾರತದ ಈ ಭಾಗದಲ್ಲಿ ಓದಬಹುದು. – ಕೆಳಗಿನಿಂದ ಮೇಲಕ್ಕೆ (5)
4. ತಿತ್ತಿತ್ತೈ ತಾಳಕ್ಕೆ ಹೀಗೂ ಹೇಳುತ್ತಾರೆ. – ಕೆಳಗಿನಿಂದ ಮೇಲಕ್ಕೆ (2)
5. ಮಾಲಿನಿಯು ತಪಸ್ಸು ಮಾಡಿ ಈ ರೂಪದ ಮಗನನ್ನು ಪಡೆದಳು. (2)
6. ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮಚರಿತ್ರೆ (8)
9. ಆಂಗಿಕದ ಜೊತೆಗೆ ಯಕ್ಷಗಾನದ ನಾಲ್ಕಂಗಗಳಲ್ಲಿ ಇದೂ ಒಂದು. – ಕೆಳಗಿನಿಂದ ಮೇಲಕ್ಕೆ (3)
10. ದಾಕ್ಷಾಯಣಿಯನ್ನು ಶಿವನಿಗೆ ಕೊಟ್ಟದ್ದು, ಕುಸುಮಮಾಲೆಯನ್ನು ಇವನಿಗೆ ಕೊಟ್ಟ ಹಾಗಾಯಿತೆಂದೇ ದಕ್ಷ ಹೇಳುತ್ತಾನೆ. (3)
11. ತೆಂಕುತಿಟ್ಟಿನ ಪ್ರಖ್ಯಾತ ಬಣ್ಣದ ವೇಷಧಾರಿ ಕೈಯಲ್ಲಿ ಕೋಲು ಹಿಡಿದುಕೊಂಡಂತೆ ಕಾಣಿಸುತ್ತಿದೆ! (5)
14. ಬಡಗುತಿಟ್ಟಿನ ಪ್ರಖ್ಯಾತ ಹರಕೆ ಮೇಳ (3)
15. ಶಿವನು ಇದನ್ನು ಹಿಡಿದುಕೊಂಡು ಭಿಕ್ಷೆ ಬೇಡಿದ ಎಂದು ಪುರಾಣಕಥೆ ನಮಗೆ ತಿಳಿಸುತ್ತದೆ (3)
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ