“ಪಾರ್ತಿಸುಬ್ಬ – ಬದುಕು ಬರಹ”
ಕವಿಯನ್ನು ಕುರಿತು ವಿಶೇಷ ಮಾಹಿತಿಗಳು ಒಂದೆಡೆ ಸಂಗ್ರಹಿತಗೊಂಡ ಕೃತಿ.
ಯಕ್ಷಗಾನ ಅಕಾಡೆಮಿ ಪ್ರಕಟಿಸಿದ ಈ ಹೊತ್ತಗೆ ಗಾತ್ರದಲ್ಲಿ ಕಿರಿದು.(142 ಪುಟ) . ಹೂರಣದಲ್ಲಿ ಹಿರಿದು.
ಕಣ್ಣೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಯಕ್ಷಗಾನ ಅಕಾಡೆಮಿ ಕಳೆದ ವರ್ಷ (2020 ಫೆಬ್ರವರಿ 13,14) ಎರಡು ದಿನಗಳ ವಿಚಾರಗೋಷ್ಠಿಯನ್ನು ನಡೆಸಿತ್ತು. ಯಕ್ಷಗಾನ ಕವಿಯೊಬ್ಬನ ಕೃತಿಗಳನ್ನು ಆಧರಿಸಿದ ವಿಶಿಷ್ಟ ಗೋ಼ಷ್ಠಿ ಇದು. ಎರಡು ದಿನಗಳ ಕಾಲ ಯಕ್ಷಗಾನದ ಹಿರಿಯ ಚಿಂತಕರುಗಳು ಪಾಲ್ಗೊಂಡು ಮಂಥನ ನಡೆಸಿದ್ದರು.ಆ ಚಿಂತನಗಳನ್ನೆಲ್ಲ ಕ್ರೋಢೀಕರಿಸಿ ಅಕಾಡೆಮಿ ಇತ್ತೀಚೆಗೆ ಪುಸ್ತಕ ಒಂದನ್ನು ಪ್ರಕಟಿಸಿದೆ.
ಈ ಗ್ರಂಥದಲ್ಲಿ ಡಾ.ಎಂ ಪ್ರಭಾಕರ ಜೋಶಿ, ಡಾ.ಪಾದೆಕಲ್ಲು ವಿಷ್ಣು ಭಟ್ಟರು, ಗಣರಾಜ ಕುಂಬ್ಳೆ, ಡಾ.ಚಂದ್ರಶೇಖರ ದಾಮ್ಲೆ, ವಾಸುದೇವ ರಂಗಾ ಭಟ್ಟರು, ಎಂ.ನಾ.ಚಂಬಲ್ತಿಮಾರ್, ಡಾ.ಯು ಶಂಕರನಾರಾಯಣ ಭಟ್ಟರು, ಡಾ.ಆನಂದರಾಮ ಉಪಾಧ್ಯ, ಡಾ.ಕೆ ಕಮಲಾಕ್ಷ, ಡಾ. ಧನಂಜಯ ಕುಂಬ್ಳೆ, ದಿವ್ಯಶ್ರೀ ಡೆಂಬಳ, ಡಾ.ಕೆ.ಎಂ.ರಾಘವ ನಂಬಿಯಾರ್ ಇವರುಗಳ ಸಂಶೋಧನಾತ್ಮಕ ಬರಹಗಳಿವೆ. ಯಕ್ಷಗಾನದ ಅಧ್ಯಯನದ ಆಸಕ್ತರಿಗೆ ಉಪಯುಕ್ತವಾದ ಆಕರ ಗ್ರಂಥ .
ಪಾರ್ತಿಸುಬ್ಬನನ್ನು ಕುರಿತ ಪ್ರೌಢ ಚಿಂತನೆಗಳುಳ್ಳ ಕೃತಿ ಯಕ್ಷಗಾನಾಸಕ್ತರೆಲ್ಲ ಸಂಗ್ರಹಿಸಿಟ್ಟುಕೊಳ್ಳಬೇಕಾದ ಕೃತಿ.
ಪ್ರಕಾಶಕರು: ಕರ್ನಾಟಕ ಯಕ್ಷಗಾನ ಅಕಡೆಮಿ ಬೆಂಗಳೂರು.
ಬೆಲೆ ರೂ 75/
ಪುಟಗಳು 142

ಕಿನ್ನಿಗೋಳಿ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

