Saturday, May 18, 2024
Homeಪುಸ್ತಕ ಮಳಿಗೆರಾಜಶ್ರೀ ಟಿ ರೈಯವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಗೌರವ ಪ್ರಶಸ್ತಿ

ರಾಜಶ್ರೀ ಟಿ ರೈಯವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಗೌರವ ಪ್ರಶಸ್ತಿ

ರವಿವಾರ ಕರ್ನಾಟಕ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅದ್ಧೂರಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  2018 ನೇ ಸಾಲಿನ ಪುಸ್ತಕ ಗೌರವ ಪ್ರಶಸ್ತಿಯನ್ನು  ಶ್ರೀಮತಿ ರಾಜಶ್ರೀ ಟಿ ರೈ ಪೆರ್ಲ ಇವರಿಗೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದರು ಅರವಿಂದ ಲಿಂಬಾವಳಿ ಮತ್ತು ಸಚಿವರಾದ ಎಸ್ ಅಂಗಾರ ಅವರು ಗಣ್ಯರ ಉಪಸ್ಥಿತಿಯಲ್ಲಿ  ಪ್ರದಾನ ಮಾಡಿದರು.

ವರ್ಷದ ಅತ್ಯುತ್ತಮ ತುಳು ಕಾದಂಬರಿಯಾಗಿ ರಾಜಶ್ರೀ ಟಿ ರೈ ಪೆರ್ಲ ಅವರ “ಕೊಂಬು” ಕಾದಂಬರಿ ಪ್ರಶಸ್ತಿಗೆ ಪಾತ್ರವಾಗಿದೆ. ಕಲ್ಲಡ್ಕ ಪ್ರಭಾಕರ ಭಟ್, ಉಡುಪಿ ಪೇಜಾವರ ಮಠದ ಪರಮ ಪೂಜ್ಯ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು  ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಕಾಂತಿ ಶೆಟ್ಟಿ ಮತ್ತು  ಅಕಾಡೆಮಿಯ  ಸದಸ್ಯರು ಮತ್ತಿತರು   ಉಪಸ್ಥಿತರಿದ್ದರು. 

ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ರಾಜಶ್ರೀ ಟಿ ರೈ ಪೆರ್ಲ ಅವರ ಯಕ್ಷಗಾನ ಕಲಾವಿದರ ಜೀವನಾಧರಿತ ತುಳು ಕಾದಂಬರಿ “ಚೌಕಿ” ಪನಿಯಾಡಿ ಪ್ರಶಸ್ತಿ ಪಡೆದುಕೊಂಡಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments