ಯಕ್ಷಗಾನವಾಗಲೀ, ನಾಟಕವಾಗಲೀ ಯುವುದೇ ಒಂದು ಕಲೆಯ ರಂಗಪ್ರದರ್ಶನಕ್ಕೆ ಬೇಕಾದ ವೇಷಭೂಷಣಗಳನ್ನು ತಯಾರಿಸಿ, ಅದನ್ನು ನಿರ್ವಹಿಸುತ್ತಾ ಮುನ್ನೆಡೆಯುವುದು ಅಷ್ಟು ಸುಲಭವಲ್ಲ. ಅದೊಂದು ಕಲೆಯೇ ಹೌದು. ಆಸಕ್ತಿ, ಅರ್ಪಣಾ ಭಾವ, ಸಹನೆ, ಎಚ್ಚರಗಳೆಂಬ ಗುಣಗಳಿದ್ದವರಿಗೆ ಮಾತ್ರ ಇದು ಸಾಧ್ಯ.
ರಂಗದಲ್ಲಿ ಪ್ರದರ್ಶನಗಳು ಯಶಸ್ವಿಯಾಗಿ ರಂಜಿಸಲು ಇವರೂ ಕಾರಣರಾಗುತ್ತಾರೆ. ಅನೇಕ ಪ್ರಸಾಧನ ತಜ್ಞರು ಇಂದು ಯಕ್ಷಗಾನ ಪ್ರದರ್ಶನಗಳಿಗೆ ವೇಷ ಭೂಷಣಗಳನ್ನು ತಯಾರಿಸಿ ಒದಗಿಸುತ್ತಿದ್ದಾರೆ. ಅಂತಹಾ ಪ್ರಸಾಧನ ತಜ್ಞರಲ್ಲಿ ಶ್ರೀ ಮಹಾಬಲ ಕಲ್ಮಡ್ಕ ಅವರೂ ಒಬ್ಬರು. ಬಹುಮುಖ ಪ್ರತಿಭೆಯ ಕಲಾವಿದರಿವರು. ಯಕ್ಷಗಾನ, ನಾಟಕ ಕಲಾವಿದರಾಗಿ, ವೇಷಭೂಷಣ ತಯಾರಕರಾಗಿ ಪ್ರಸಾಧನ ತಂಡದ ನಾಯಕನಾಗಿ, ಕಲಾ ಪ್ರದರ್ಶನಗಳ ಸಂಘಟಕರಾಗಿ, ನಿರ್ದೇಶಕರಾಗಿ, ಕಾಷ್ಠಶಿಲ್ಪ ತಯಾರಕರಾಗಿ ಗುರುತಿಸಿಕೊಂಡಿದ್ದಾರೆ.

ಶ್ರೀಯುತರು ಕಲ್ಮಡ್ಕದ ‘ರಂಗ ಸುರಭಿ’ ಪ್ರಸಾಧನ ಸಂಸ್ಥೆಯ ರೂವಾರಿಗಳು. ಶ್ರೀ ಮಹಾಬಲ ಭಟ್ ಅವರು ಸುಳ್ಯ ತಾಲೂಕು ಕಲ್ಮಡ್ಕದ ಕೆರೆಕೋಡಿ ಎಂಬಲ್ಲಿ 1962 ಜನವರಿ 6ರಂದು ಕೆರೆಕೋಡಿ ಪಂಡಿತ ಗಣಪತಿ ಭಟ್ ಮತ್ತು ಪಾರ್ವತೀ ಅಮ್ಮ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು. ಕೆರೆಕೋಡಿ ಗಣಪತಿ ಭಟ್ಟರು ಆಯುರ್ವೇದ ವೈದ್ಯರಾಗಿ ಕಲಾವಿದರಾಗಿ, ಸಂಘಟಕರಾಗಿ ಪ್ರಸಿದ್ಧರು. ಕಲ್ಮಡ್ಕದ ‘ಸಂಗಮ ಕಲಾ ಸಂಘ’ ಎಂಬ ಸಂಸ್ಥೆಯನ್ನು ಊರ ಮಿತ್ರರ ಸಹಕಾರದಿಂದ ಹುಟ್ಟಿ ಹಾಕಿ ನಿರಂತರ ಕಲಾ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇವರ ಮೂಲ ಮನೆ ಕಾಸರಗೋಡು ತಾಲೂಕಿನ ಪಳ್ಳತ್ತಡ್ಕ ಎಂಬಲ್ಲಿ. ಇವರು ಸಮಾಜ ಸೇವಕರೂ ಆಗಿದ್ದರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಮಹಾಬಲ ಕಲ್ಮಡ್ಕ ಅವರಿಗೆ ಕಲಾಸಕ್ತಿ ಹಿರಿಯರಿಂದಲೇ ಬಂದ ಬಳುವಳಿ. ಇವರು ಪದವೀಧರರು. ಓದಿದ್ದು ಕಲ್ಮಡ್ಕ ಶಾಲೆ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ, ಬೆಳ್ಳಾರೆ ಪದವಿ ಪೂರ್ವ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜುಗಳಲ್ಲಿ. ಬಾಲ್ಯದಲ್ಲೇ ಯಕ್ಷಗಾನ, ನಾಟಕ, ತಾಳಮದ್ದಲೆಗಳನ್ನು ನೋಡುತ್ತಾ ಬೆಳೆದವರು. ಕುಡ್ಪ ಶ್ರೀ ರಾಮಚಂದ್ರ ಹೆಗಡೆ ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತು 7ನೇ ಕ್ಲಾಸಿನಲ್ಲಿರುವಾಗ ರಂಗ ಪ್ರವೇಶ ಮಾಡಿದ್ದರು.

ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಶಾಲಾ ವಾರ್ಷಿಕೋತ್ಸವದ ಪ್ರದರ್ಶನಗಳಲ್ಲಿ ಮತ್ತು ಕಲ್ಮಡ್ಕ ಸಂಗಮ ಕಲಾ ಸಂಘದ ಪ್ರದರ್ಶನಗಳಲ್ಲಿ ವೇಷ ಮಾಡಿದ್ದರು. ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಸಂಗಮ ಕಲಾ ಸಂಘದ ಆಶ್ರಯದಲ್ಲಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿರುವಾಗ ಪ್ರಸಂಗಕರ್ತ, ವಿದ್ವಾಂಸ, ಉಪನ್ಯಾಸಕ, ಶ್ರೀ ಅಮೃತ ಸೋಮೇಶ್ವರರ ಪ್ರೋತ್ಸಾಹವೂ ದೊರಕಿತ್ತು. ಅವರೊಂದಿಗೆ ಯಕ್ಷಗಾನದ ಅನೇಕ ಶಿಬಿರ, ಕಮ್ಮಟಗಳಿಗೆ ತೆರಳಿ ಮುಖವರ್ಣಿಕೆ, ವೇಷ ಧರಿಸುವ ಕ್ರಮವನ್ನು ಅಭ್ಯಸಿಸಿದ್ದರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಕಲಾಗಂಗೋತ್ರಿ ಕೋಟೆಕಾರು, ಕಟೀಲು, ಉಡುಪಿ ಯಕ್ಷಗಾನ ಅಧ್ಯಯನ ಕೇಂದ್ರ, ಸುಳ್ಯ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ, ಮೊದಲಾದೆಡೆ ನಡೆದ ಶಿಬಿರಗಳಲ್ಲಿ ಭಾಗಿಯಾಗಿ ಅಧ್ಯಯನ ನಡೆಸಿದ್ದರು. ಕೇರಳದಲ್ಲಿ ಕಥಕ್ಕಳಿ ಎಂಬ ಕಲಾ ಪ್ರಕಾರದ ಶಿಬಿರಗಳಲ್ಲೂ ಪಾಲುಗೊಂಡಿದ್ದರು. ಈ ಅನುಭವದ ಆಧಾರದಿಂದಲೇ ಸಂಗಮ ಕಲಾ ಸಂಘದಲ್ಲಿ ಸಕ್ರಿಯರಾಗಿ ಅದರ ಬೆಳವಣಿಗೆಗೆ ಕಾರಣರಾಗಿದ್ದರು. ಪದವಿ ಶಿಕ್ಷಣದ ನಂತರ ತಂದೆ ಕೆರೆಕೋಡಿ ಗಣಪತಿ ಭಟ್ಟರಿಂದಲೂ ಯಕ್ಷಗಾನ ವೇಷಭೂಷಣ ತಯಾರಿಕೆಯನ್ನು ಕಲಿತಿದ್ದರು.

ಹೀಗೆ ಯಕ್ಷಗಾನದ ಪ್ರತಿಯೊಂದು ವೇಷ- ಭೂಷಣಗಳ ಆಯ, ಆಕಾರ, ಬಣ್ಣದ ಹೊಂದಾಣಿಕೆ ಮೊದಲಾದ ವಿಚಾರಗಳ ಜ್ಞಾನವನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸಾಗರ ಹೆಗ್ಗೋಡಿನ ‘ನೀನಾಸಂ’ ತಂಡದ ಶಿಬಿರವು ಬಾಳಿಲದಲ್ಲಿ ನಡೆದಿತ್ತು. ಶಿಬಿರದ ಕೊನೆಯಲ್ಲಿ ರಂಗಪ್ರದರ್ಶನವೂ ನಡೆದಿತ್ತು. ಇದರಿಂದ ಪ್ರಭಾವಿತರಾಗಿ ಮಹಾಬಲ ಕಲ್ಮಡ್ಕ ಅವರು ಹೆಗ್ಗೋಡಿಗೆ ತೆರಳಿ ‘ನೀನಾಸಂ’ ಸಂಸ್ಥೆಯಲ್ಲಿ ತರಬೇತಿ ಪಡೆದರು.(1988ರಲ್ಲಿ, ಒಂದು ವರ್ಷದ ಡಿಪ್ಲೊಮಾ).’ನೀನಾಸಂ’ನಲ್ಲಿ ತರಬೇತಿ ಪಡೆದು ಮರಳಿದ ಬಳಿಕ ಊರಿನಲ್ಲಿ ಮಹಾಬಲ ಕಲ್ಮಡ್ಕ ಅವರು ಕಲಿಕಾಸಕ್ತರಿಗೆ ವೇಷಭೂಷಣ ತಯಾರಿಕೆ, ಮುಖವರ್ಣಿಕೆಯ ಬಗೆಗೆ ತರಬೇತಿಯನ್ನು ನೀಡಿದರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಅಲ್ಲದೆ ಸಂಗಮ ಕಲಾಸಂಘದ ಪ್ರದರ್ಶನಗಳ ಮತ್ತು ವೇಷಭೂಷಣಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಸದ್ರಿ ಸಂಘವು ವೇಷಭೂಷಣಗಳ ನಿರ್ವಹಣೆಯನ್ನು ನಿಲ್ಲಿಸಿದಾಗ ಮಹಾಬಲ ಕಲ್ಮಡ್ಕ ಅವರು ಅದನ್ನು ಮುಂದುವರಿಸುವ ಯೋಚನೆಯನ್ನು ಮಾಡಿ ‘ರಂಗ ಸುರಭಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು.(2001ರಲ್ಲಿ). ಈ ಸಂಸ್ಥೆಯಡಿಯಲ್ಲಿ ವೇಷಭೂಷಣಗಳ ತಯಾರಿಕೆ,ನಿರ್ವಹಣೆ, ಪ್ರದರ್ಶನಗಳಿಗೆ ಅದನ್ನು ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾ ಈ ವರೆಗೂ ಮುನ್ನಡೆದು ಸಾಗಿ ಬಂದಿದ್ದಾರೆ. ಅನೇಕ ಶಿಬಿರಗಳನ್ನು ನಡೆಸಿ ತರಬೇತಿಯನ್ನೂ ನೀಡಿರುತ್ತಾರೆ.

ರಂಗಸುರಭಿ ಮಕ್ಕಳ ತಂಡವನ್ನು ಸ್ಥಾಪಿಸಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ತರಬೇತಿ ಕೊಡಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ವರ್ಷಕ್ಕೆ ಸುಮಾರು ನೂರು ಪ್ರದರ್ಶನಗಳಿಗೆ ಇವರು ರಂಗ ಸುರಭಿ ತಂಡದ ವೇಷಭೂಷಣಗಳನ್ನು ಒದಗಿಸುತ್ತಾರೆ. ಸುಮಾರು ಐವತ್ತಕ್ಕೂ ಹೆಚ್ಚು ಶಿಬಿರ, ಕಮ್ಮಟಗಳಿಗೆ ಇವರು ವೇಷ ಭೂಷಣಗಳನ್ನು ಒದಗಿಸಿರುತ್ತಾರೆ. ಇವರು ಉತ್ತಮ ಕಾಷ್ಠ ಶಿಲ್ಪಕಾರರೂ ಹೌದು. ಡಾ. ಪುರುಷೋತ್ತಮ ಬಿಳಿಮಲೆ ಅವರ ಅಪೇಕ್ಷೆಯಂತೆ ಹಂಪಿ ವಿಶ್ವವಿದ್ಯಾನಿಲಯಕ್ಕೆ ಮರದಿಂದ ಕೆತ್ತಿ ನಿರ್ಮಿಸಿದ ರಾಜವೇಷದ ಪ್ರತಿಕೃತಿಯನ್ನು ನೀಡಿದ್ದಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಜಪಾನಿನ ವಿದ್ವಾಂಸರಾದ ಶ್ರೀ ಸುಮಿಯೋ ಮೊರಿಜೆರಿ ಅವರ ಅಪೇಕ್ಷೆಯಂತೆ ಜಪಾನಿನ ವಸೇಡಾ ವಿಶ್ವವಿದ್ಯಾನಿಲಯದ ಜಾಗತಿಕ ರಂಗಭೂಮಿ ಪ್ರದರ್ಶನಾಂಗಣಕ್ಕೆ ಯಕ್ಷಗಾನದ ವಿವಿಧ ವೇಷಗಳ ಐದು ಪ್ರತಿಕೃತಿಗಳನ್ನು ಮತ್ತು ಇತರ ವೇಷ ಭೂಷಣಗಳನ್ನು ನೀಡಿರುತ್ತಾರೆ. ಪ್ರಾಂಶುಪಾಲ ಪ್ರೊ| ಶ್ರೀ ಪದ್ಮನಾಭ ಗೌಡರ ಸಲಹೆಯಂತೆ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರದರ್ಶನಾಂಗಣಕ್ಕೆ ತೆಂಕುತಿಟ್ಟಿನ ವಿವಿಧ ವೇಷಗಳ ಪ್ರತಿಕೃತಿಗಳನ್ನು ನೀಡಿದ್ದಾರೆ. ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನಾಗಾರಕ್ಕೆ ಆಡಳಿತ ಮಂಡಳಿಯ ಅಪೇಕ್ಷೆಯಂತೆ ವಿವಿಧ ಪ್ರತಿಕೃತಿಗಳನ್ನು ನೀಡಿರುತ್ತಾರೆ.
ಹಲವಾರು ಮೇಳಗಳಿಗೂ ಸಂಘ ಸಂಸ್ಥೆಗಳಿಗೂ, ಕಲಾವಿದರಿಗೂ ವೇಷಭೂಷಣಗಳನ್ನು ತಯಾರಿಸಿ ನೀಡಿದವರು ಶ್ರೀ ಮಹಾಬಲ ಕಲ್ಮಡ್ಕ ಅವರು. ಪ್ರಸಾಧನ ಕಲೆಗಾರಿಕೆಯಲ್ಲಿ ಇವರಿಗೆ, ಗುರು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಮಾರ್ಗದರ್ಶನವೂ ದೊರಕಿತ್ತು. 1985ರಲ್ಲಿ ಶ್ರೀ ದಿವಾಣ ಭೀಮ ಭಟ್ಟರಿಂದ ಹಿಮ್ಮೇಳ ವಿದ್ಯೆಯನ್ನೂ ಕಲಿತಿದ್ದ ಶ್ರೀ ಮಹಾಬಲ ಕಲ್ಮಡ್ಕ ಅವರು ಹಲವಾರು ಪ್ರದರ್ಶನಗಳಲ್ಲಿ ಭಾಗವತರಾಗಿಯೂ, ಚೆಂಡೆ ಮದ್ದಳೆ ವಾದಕರಾಗಿಯೂ ಸಹಕರಿಸಿರುತ್ತಾರೆ.

1991ರಲ್ಲಿ ಸುಭಾಷಿನಿ ಅವರ ಜತೆ ವಿವಾಹ. ಶ್ರೀ ಮಹಾಬಲ ಕಲ್ಮಡ್ಕ ಮತ್ತು ಶ್ರೀಮತಿ ಸುಭಾಷಿನಿ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಕು| ಶಿಲ್ಪ. ಎಂ. ಫಾರ್ಮ ಓದಿರುತ್ತಾಳೆ. ಯಕ್ಷಗಾನ ಕಲಾವಿದೆ. ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತು ಸುಮಾರು 75ಕ್ಕೂ ಮಿಕ್ಕಿದ ಪ್ರದರ್ಶನಗಳಲ್ಲಿ ಭಾಗಿಯಾಗಿರುತ್ತಾಳೆ. ಅನೇಕ ಪ್ರತಿಭಾ ಪುರಸ್ಕಾರಗಳನ್ನೂ ಪಡೆದ ಈಕೆ ಸಂಗೀತ, ಭರತನಾಟ್ಯ ಕಲಾವಿದೆಯೂ ಹೌದು. ಪ್ರಸ್ತುತ ಬೆಂಗಳೂರಿನ ಬಯೋ- ಕಾನ್ ಲಿಮಿಟೆಡ್ ಸಂಸ್ಥೆಯಲ್ಲಿ ಉದ್ಯೋಗಸ್ಥೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಕಿರಿಯ ಪುತ್ರಿ ಕು|ಶ್ರದ್ಧಾ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಜೋಗಿಬೆಟ್ಟು ಶ್ರೀನಿವಾಸ ಭಟ್ಟರಿಂದ ನಾಟ್ಯ ಕಲಿತು ಶಾಲಾ ಕಾಲೇಜಿನ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷ ಮಾಡಿರುತ್ತಾಳೆ. ಬಹುಮುಖ ಪ್ರತಿಭೆಯ ಶ್ರೀ ಮಹಾಬಲ ಕಲ್ಮಡ್ಕ ಅವರ ಕಲಾ ಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು.
ಲೇಖಕ: ರವಿಶಂಕರ್ ವಳಕ್ಕುಂಜ

