Saturday, May 18, 2024
Homeಸುದ್ದಿತಾಲೂಕು ಯಕ್ಷಗಾನ ಪ್ರಸಂಗಕರ್ತ, ಕಲಾವಿದ ಹಾಗೂ ವೈದ್ಯ ಡಾ. ಪಟ್ಟಾಜೆ ಗಣೇಶ ಭಟ್ ನಿಧನ

ಯಕ್ಷಗಾನ ಪ್ರಸಂಗಕರ್ತ, ಕಲಾವಿದ ಹಾಗೂ ವೈದ್ಯ ಡಾ. ಪಟ್ಟಾಜೆ ಗಣೇಶ ಭಟ್ ನಿಧನ

ಯಕ್ಷಗಾನ ಪ್ರಸಂಗಕರ್ತ, ಕಲಾವಿದ ಹಾಗೂ ವೈದ್ಯ ಡಾ. ಪಟ್ಟಾಜೆ ಗಣೇಶ ಭಟ್ ಇಂದು ನಿಧನರಾಗಿದ್ದಾರೆ. ಅವರು ಕಾವು ಸಮೀಪದ ಪಟ್ಟಾಜೆಯ ತಮ್ಮ ಸ್ವಗೃಹದಲ್ಲಿ ಇಂದು ಅಸ್ತಂಗತರಾದರು.

 
 ಹವ್ಯಾಸಿ ವೇಷಧಾರಿಯಾಗಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಯಕ್ಷಗಾನ ಪ್ರಸಂಗಗಳನ್ನು ಬರೆಯುವಲ್ಲಿ ತೊಡಗಿಸಿಕೊಂಡಿದ್ದ ಡಾ. ಪಟ್ಟಾಜೆ ಗಣೇಶ ಭಟ್ಟರು ಹಲವಾರು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದರು.

ಅವರು ರಚಿಸಿದ್ದ  ಹನ್ನೆರಡು ಪ್ರಸಂಗಗಳನ್ನು ಒಳಗೊಂಡ ಸಂಪುಟವೇ ‘ ಯಕ್ಷ ದ್ವಾದಶಾಮೃತಮ್ ಪ್ರಸಂಗಮಾಲಿಕಾ’ ಎಂಬ ಪುಸ್ತಕವು ಕಳೆದ ವರ್ಷ  ಬಿಡುಗಡೆಗೊಂಡಿದ್ದುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. 

ಒಳ್ಳೆಯ ವೈದ್ಯರಾಗಿಯೂ ಹೆಸರು ಗಳಿಸಿದ್ದ  ಶ್ರೀಯುತರು  ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  ಜನಾನುರಾಗಿಯಾಗಿದ್ದ ಶ್ರೀ ಪಟ್ಟಾಜೆ ಗಣೇಶ ಭಟ್ಟರು ತಮ್ಮ ಪತ್ನಿ, ಮಕ್ಕಳು, ಅಪಾರ ಸ್ನೇಹಿತ, ಬಂಧುವರ್ಗದವರನ್ನೂ ಕಲಾಭಿಮಾನಿಗಳನ್ನೂ ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments