Saturday, May 18, 2024
Homeಯಕ್ಷಗಾನಚಿಟ್ಟಾಣಿ ರಾಮಚಂದ್ರ ಹೆಗಡೆ (Chittani Ramachandra Hegade)

ಚಿಟ್ಟಾಣಿ ರಾಮಚಂದ್ರ ಹೆಗಡೆ (Chittani Ramachandra Hegade)

ಚಿಟ್ಟಾಣಿ ರಾಮಚಂದ್ರ ಹೆಗಡೆಯವರ  ಜೀವನ ಚರಿತ್ರೆ
ಹೆಸರು:  ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ 
ಪತ್ನಿ: ಶ್ರೀಮತಿ  ಸುಶೀಲ (ಕಡತೋಕ ಮಳ್ಳಜ್ಜಿ ನಾರಾಯಣ ಹೆಗಡೆಯವರ ಕಿರಿಯ ಪುತ್ರಿ ಸುಶೀಲ)
ಜನನ:  1935ನೇ ಇಸವಿ ಆಗಸ್ಟ್ 18ರಂದು  
ಜನನ ಸ್ಥಳ:   ಉತ್ತರ ಕನ್ನಡ ಜಿಲ್ಲೆಯ ಹೊಸಾಕುಳಿ ಗ್ರಾಮದ ಒಂದು ಹಳ್ಳಿ ಚಿಟ್ಟಾಣಿ.   
ತಂದೆ ತಾಯಿ:  ತಂದೆ ಶ್ರೀ ಸುಬ್ರಾಯ ಹೆಗಡೆ. ತಾಯಿ ಶ್ರೀಮತಿ ಗಣಪಿ ಅಮ್ಮ.  
ಯಕ್ಷಗಾನ ಗುರುಗಳು:  ಸಂತೆಗುಳಿ ಬಾಳೆಗದ್ದೆ ರಾಮಕೃಷ್ಣ ಭಟ್ಟರು  
ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ: ೫೦ ವರ್ಷಕ್ಕೂ ಮೇಲ್ಪಟ್ಟು ಮೇಳದ ತಿರುಗಾಟ (ಬಾಳೆಗೆದ್ದೆ ಮೇಳ, ಮೂಡ್ಕಣಿ ಮೇಳ, ಮಾವಿನಕುರ್ವೆ ಮೇಳ, ಮೂರೂರು ಮೇಳ, ಗುಂಡಬಾಳಾ ಮೇಳ, ಸಂಯುಕ್ತ ಮೇಳ, ಕೊಳಗಿಬೀಸ್ ಮೇಳ, ಅಮೃತೇಶ್ವರೀ ಮೇಳ (ಅಮೃತೇಶ್ವರೀ ಮೇಳ-13 ವರ್ಷಗಳು), ಶಿರಸಿ ಪಂಚಲಿಂಗೇಶ್ವರ ಮೇಳ, ಸಾಲಿಗ್ರಾಮ ಮೇಳ-೧ ವರ್ಷ, ಬಚ್ಚಗಾರು ಮೇಳ, ಶಿರಸಿ ಮಾರಿಕಾಂಬಾ ಮೇಳ, ಪೆರ್ಡೂರು ಮೇಳ,  ನಂತರ ಮೇಳದ ತಿರುಗಾಟ ನಿಲ್ಲಿಸಿದ್ದರು. ಆದರೆ‘ಬಂಗಾರಮಕ್ಕಿ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಎಂಬ ಬಯಲಾಟದ ತಂಡದಲ್ಲಿ ಭಾಗವಹಿಸುತ್ತಿದ್ದರು.  ಅಲ್ಲದೆ ಅತಿಥಿ ಕಲಾವಿದರಾಗಿ ವೇಷ ಮಾಡುತ್ತಿದ್ದರು.
ಮಕ್ಕಳು:  ಪುತ್ರರಾದ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಮತ್ತು ಶ್ರೀ ನರಸಿಂಹ ಚಿಟ್ಟಾಣಿ ಯಕ್ಷಗಾನ ಕ್ಷೇತ್ರದಲ್ಲಿ ಒಳ್ಳೆಯ ಕಲಾವಿದರಾಗಿ ಹೆಸರು ಗಳಿಸಿದ್ದಾರೆ. ಮೊಮ್ಮಗ ಶ್ರೀ ಕಾರ್ತಿಕ್ ಚಿಟ್ಟಾಣಿ ಅವರು ಉದಯೋನ್ಮುಖ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿಟ್ಟಾಣಿಯವರ ಮನಮೆಚ್ಚಿದ ಹಾಗೂ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು:  ಸಾಲ್ವ (ಭೀಷ್ಮವಿಜಯ) ಸುಧನ್ವ (ಸುಧನ್ವಾರ್ಜುನ) ಅರ್ಜುನ (ಕೃಷ್ಣಾರ್ಜುನಕಾಳಗ) ಅರ್ಜುನ (ಐರಾವತ) ಕೃಷ್ಣ (ಮಾರುತಿ ಪ್ರತಾಪ) ಹನೂಮಂತ (ಲಂಕಾದಹನ) ದಕ್ಷ (ದಕ್ಷಯಜ್ಞ) ಭರತ (ಧರ್ಮಾಂಗದ ದಿಗ್ವಿಜಯ)  ಕೌರವ (ಗದಾಪರ್ವ) ಭಸ್ಮಾಸುರ (ಭಸ್ಮಾಸುರ-ಮೋಹಿನಿ) ಕಲಾಧರ (ಕಾಳೀದಾಸ) ಕೃಷ್ಣ (ಚಂದ್ರಾವಳಿವಿಲಾಸ) ಕೀಚಕ (ಕೀಚಕವಧೆ) ದುಷ್ಟಬುದ್ಧಿ (ಚಂದ್ರಹಾಸಚರಿತ್ರೆ) ರುದ್ರಕೋಪ(ಚಿತ್ರಾಕ್ಷಿಕಲ್ಯಾಣ) ಕಂಸ (ಕಂಸವಧೆ) ಕಾರ್ತವೀರ್ಯ(ಕಾರ್ತವೀರ್ಯಾರ್ಜುನ ಕಾಳಗ) ಮಾಗಧ (ಮಾಗಧವಧೆ)  ಸುಂದರರಾವಣ (ಚೂಡಾಮಣಿ)
ಕೀಚಕ, ಭಸ್ಮಾಸುರ, ರುದ್ರಕೋಪ, ಕಾರ್ತವೀರ್ಯ, ಕೌರವ, ದುಷ್ಟಬುದ್ಧಿ, ಸಂಧಾನದ ಕೃಷ್ಣ ಇವೆಲ್ಲ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು.
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.  ಅದರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಅನೇಕ ಸಂಘ-ಸಂಸ್ಥೆಗಳು ‘ಕಲಾಧರ ಚಿಟ್ಟಾಣಿ’ ಅವರನ್ನು ಸನ್ಮಾನಿಸಿ ಗೌರವಿಸಿದೆ ಚಿಟ್ಟಾಣಿಯವರ ವಿಶೇಷ ಕೃತಜ್ಞತೆ: ಕಾಳಿದಾಸ ಪ್ರಸಂಗದಲ್ಲಿ ಕಲಾಧರನ ಪಾತ್ರ ಮಾಡಿಸಿ ಪ್ರೋತ್ಸಾಹಿಸಿದ ಕಡತೋಕಾ ಮಂಜುನಾಥ ಭಾಗವತರಿಗೆ  ನಿಧನ: 2017ನೇ ಇಸವಿ ಒಕ್ಟೋಬರ್ 3ರಂದು 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments