ಜನಪ್ರಿಯ ಜನಪ್ರಿಯ ಪಿಟೀಲು (ವಯಲಿನ್) ವಾದಕ ಪದ್ಮಭೂಷಣ ಟಿ. ಎನ್. ಕೃಷ್ಣನ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
1928ರ ಅಕ್ಟೋಬರ್ 6ರಂದು ಕೇರಳದ ತ್ರಿಪುಣಿತ್ತರದಲ್ಲಿ ಜನಿಸಿದ್ದ ಟಿ. ಎನ್. ಕೃಷ್ಣನ್ ಅವರ ತಂದೆ ಪ್ರಸಿದ್ಧ ಸಂಗೀತಗಾರ ನಾರಾಯಣ ಅಯ್ಯರ್ ಮತ್ತು ತಾಯಿ ಅಮ್ಮಿಣಿ ಅಮ್ಮಾಳ್. ಸಂಗೀತದ ಆರಂಭಿಕ ಪಾಠವನ್ನು ತಂದೆಯಿಂದಲೇ ಅಭ್ಯಾಸ ಮಾಡಿದ್ದರು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಆಮೇಲೆ ಹೆಚ್ಚಿನ ಕಲಿಕೆಯನ್ನು ಕೆ. ಪಾರ್ಥಸಾರಥಿ ಅಲೆಪ್ಪಿ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್ ಮೊದಲಾದವರ ಬಳಿ ಮಾಡಿದ್ದರು. ಪದ್ಮಭೂಷಣ ಟಿ. ಎನ್. ಕೃಷ್ಣನ್ ಹಿಂದಿನ ತಲೆಮಾರುಗಳ ಕರ್ನಾಟಕ ಸಂಗೀತದ ದಂತಕಥೆಗಳಾಗಿದ್ದ ಹಲವಾರು ಸಂಗೀತಗಾರರೊಂದಿಗೆ ಪ್ರದರ್ಶನ ನೀಡಿದ್ದರು.
ಅರಿಯಕುಡಿ ರಾಮಾನುಜ ಅಯ್ಯಂಗಾರ್, ಅಲತೂರ್ ಬ್ರದರ್ಸ್, ಚೆಂಬೈ ವೈದ್ಯನಾಥ ಭಾಗವತರ್, ಎಂಡಿ ರಾಮನಾಥನ್ ಮತ್ತು ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರೊಂದಿಗೆ ಟಿ. ಎನ್. ಕೃಷ್ಣನ್ ಅವರು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದರು. ಅವರ ವಯಲಿನ್ ಕಚೇರಿಯ ವಿಡಿಯೋ ಕೆಳಗಡೆ ಇದೆ.