ಜನಪ್ರಿಯ ಜನಪ್ರಿಯ ಪಿಟೀಲು (ವಯಲಿನ್) ವಾದಕ ಪದ್ಮಭೂಷಣ ಟಿ. ಎನ್. ಕೃಷ್ಣನ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

1928ರ ಅಕ್ಟೋಬರ್ 6ರಂದು ಕೇರಳದ ತ್ರಿಪುಣಿತ್ತರದಲ್ಲಿ ಜನಿಸಿದ್ದ ಟಿ. ಎನ್. ಕೃಷ್ಣನ್ ಅವರ ತಂದೆ ಪ್ರಸಿದ್ಧ ಸಂಗೀತಗಾರ ನಾರಾಯಣ ಅಯ್ಯರ್ ಮತ್ತು ತಾಯಿ ಅಮ್ಮಿಣಿ ಅಮ್ಮಾಳ್. ಸಂಗೀತದ ಆರಂಭಿಕ ಪಾಠವನ್ನು ತಂದೆಯಿಂದಲೇ ಅಭ್ಯಾಸ ಮಾಡಿದ್ದರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಆಮೇಲೆ ಹೆಚ್ಚಿನ ಕಲಿಕೆಯನ್ನು ಕೆ. ಪಾರ್ಥಸಾರಥಿ ಅಲೆಪ್ಪಿ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್ ಮೊದಲಾದವರ ಬಳಿ ಮಾಡಿದ್ದರು. ಪದ್ಮಭೂಷಣ ಟಿ. ಎನ್. ಕೃಷ್ಣನ್ ಹಿಂದಿನ ತಲೆಮಾರುಗಳ ಕರ್ನಾಟಕ ಸಂಗೀತದ ದಂತಕಥೆಗಳಾಗಿದ್ದ ಹಲವಾರು ಸಂಗೀತಗಾರರೊಂದಿಗೆ ಪ್ರದರ್ಶನ ನೀಡಿದ್ದರು.

ಅರಿಯಕುಡಿ ರಾಮಾನುಜ ಅಯ್ಯಂಗಾರ್, ಅಲತೂರ್ ಬ್ರದರ್ಸ್, ಚೆಂಬೈ ವೈದ್ಯನಾಥ ಭಾಗವತರ್, ಎಂಡಿ ರಾಮನಾಥನ್ ಮತ್ತು ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರೊಂದಿಗೆ ಟಿ. ಎನ್. ಕೃಷ್ಣನ್ ಅವರು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದರು. ಅವರ ವಯಲಿನ್ ಕಚೇರಿಯ ವಿಡಿಯೋ ಕೆಳಗಡೆ ಇದೆ.

