Friday, September 20, 2024
Homeಪುಸ್ತಕ ಮಳಿಗೆಒಂದೊಂದು ನದಿಗೂ ಒಂದೊಂದು ಕಥೆ - ತಾರಾನಾಥ ವರ್ಕಾಡಿ

ಒಂದೊಂದು ನದಿಗೂ ಒಂದೊಂದು ಕಥೆ – ತಾರಾನಾಥ ವರ್ಕಾಡಿ

ಶ್ರೀ ತಾರಾನಾಥ ವರ್ಕಾಡಿ ಅವರು ತೆಂಕುತಿಟ್ಟಿನ ಹಿರಿಯ ಕಲಾವಿದರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಪುಂಡುವೇಷಧಾರಿಯಾಗಿ ಅನೇಕ ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದ ಇವರು ಕನ್ನಡ ಎಂ. ಎ. ಪದವೀಧರರು. ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ನಾಟ್ಯವನ್ನು ಕಲಿತು ಸುಂಕದಕಟ್ಟೆ, ಕದ್ರಿ, ನಂದಾವರ, ಅರುವ, ಬಪ್ಪನಾಡು ಮೇಳಗಳಲ್ಲಿ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆಯನ್ನು ಮಾಡಿ ತಿರುಗಾಟಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿದ ಇವರಿಗೆ ಬಳಿಕ ಅದೇ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಭಾಗ್ಯವೂ ಒದಗಿ ಬಂದಿತ್ತು. ಶ್ರೀ ತಾರಾನಾಥ ವರ್ಕಾಡಿಯವರ ಅನೇಕ ಶಿಷ್ಯಂದಿರು ಇಂದು ವಿವಿಧ ಮೇಳಗಳಲ್ಲಿ ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಕಲಾವಿದನಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದತ್ತ ಒಲವನ್ನು ಹರಿಸಿದ್ದರು. ಬರೆಯುವ ಕಲೆಯು ಸಿದ್ಧಿಸಿತ್ತು. ಪ್ರಬುದ್ಧ ಲೇಖಕನಾಗಿಯೂ ಗುರುತಿಸಿಕೊಂಡರು. ಸರಸ್ವತಿ ದೇವಿಯ ಅನುಗ್ರಹದಿಂದ ಪ್ರಸಂಗ ರಚನೆ ಮತ್ತು ಕೃತಿ ರಚನಾ ಕಾಯಕಗಳಲ್ಲೂ ತೊಡಗಿಸಿಕೊಂಡರು. ಡಾ. ಶಿಮಂತೂರು ನಾರಾಯಣ ಶೆಟ್ಟಯವರಿಂದ ಪ್ರಸಂಗ ರಚನಾ ಕ್ರಮವನ್ನೂ ಶ್ರೀ ಕೊರ್ಗಿ ವೆಂಕಟೇಶ ಉಪಾಧ್ಯಾಯರಿಂದ ಅರ್ಥಗಾರಿಕೆಯನ್ನೂ ಶ್ರೀ ತಾರಾನಾಥರು ಅಭ್ಯಸಿಸಿದ್ದರು. ಪ್ರಸ್ತುತ ಅನೇಕ ವರ್ಷಗಳಿಂದ ‘ಬಲ್ಲಿರೇನಯ್ಯ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಕಲಾಭಿಮಾನಿಗಳಿಗೆ ಇವರು ಪರಿಚಿತರು. ವಿದ್ವಾಂಸರಾದ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ಬದುಕು ಬರಹ ಕುರಿತಾದ ಬರೆದ ಅಭಿನವ ನಾಗವರ್ಮ ಮತ್ತು ಪುರಾಣ ಲೋಕದ ಬಾಲಕರು ಎಂಬ ಪುಸ್ತಕಗಳು ಪ್ರಕಟವಾಗಿ ಓದುಗುರ ಕೈ ಸೇರಿದ ವಿಚಾರ ಎಲ್ಲರಿಗೂ ತಿಳಿದಿದೆ. ಕನ್ನಡ ಪೌರಾಣಿಕ, ಕಾಲ್ಪನಿಕ ಪ್ರಸಂಗಗಳನ್ನೂ ರಚಿಸಿದ್ದಾರೆ.

ಶ್ರೀ ತಾರಾನಾಥ ವರ್ಕಾಡಿ ಅವರು ಬರೆದ ಈ ಕೃತಿಯ ಹೆಸರು ‘ಒಂದೊಂದು ನದಿಗೂ ಒಂದೊಂದು ಕಥೆ’. ಈ ಹೊತ್ತಗೆಯು 2012ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಪ್ರಕಾಶಕರು ಆಜ್ಞಾಸೋಹಮ್ ಪ್ರಕಾಶನ ಬೆಳ್ಮಣ್ಣು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗಡೆಯವರು ಶುಭ ಹಾರೈಸಿ ಆಶೀರ್ವದಿಸಿರುತ್ತಾರೆ. ಬಳಿಕ ‘ನಾಲ್ಕು ಮಾತುಗಳು’ ಎಂಬ ಶೀರ್ಷಿಕೆಯಡಿ ಶ್ರೀ ಕೆ.ಎಸ್. ನಾರಾಯಣಾಚಾರ್ಯ ಅವರ ಲೇಖನವಿದೆ. ಲೇಖಕ ಶ್ರೀ ತಾರಾನಾಥ ವರ್ಕಾಡಿಯವರು ‘ಮನದೊಳಗಿನ ಮಂದಾಕಿನಿ’ ಶೀರ್ಷಿಕೆಯಡಿ ಸಹಕರಿಸಿದ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಸುಮಾರು ಇನ್ನೂರ ಮೂವತ್ತು ಪುಟಗಳಿಗೆ ಚಾಚಿದ ಈ ಕೃತಿಯಲ್ಲಿ ಒಟ್ಟು ನೂರಾ ಹನ್ನೊಂದು ನದಿಗಳ ಉಗಮ ಮತ್ತು ಅವುಗಳ ವಿಶೇಷತೆಗಳನ್ನು ಶ್ರೀ ತಾರಾನಾಥ ವರ್ಕಾಡಿ ಅವರು ವಿವರವಾಗಿ ನೀಡಿರುತ್ತಾರೆ. ಬಳಿಕ ‘ಒಂದು ಹರಕೆ’ ಶೀರ್ಷಿಕೆಯಡಿ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರ ಲೇಖನವಿದೆ. ಲೇಖಕ ಶ್ರೀ ತಾರಾನಾಥರ ಬದುಕಿನ ವಿವರವನ್ನೂ ಸಂಕ್ಷಿಪ್ತವಾಗಿ ನೀಡಲಾಗಿದೆ.

ಲೇಖಕ:ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments