ಮಾನಸಿ ಸುಧೀರ್ .. ಹೌದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೀಕ್ಷಣೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿರುವ ವಿಡಿಯೋಗಳಲ್ಲಿ ಮಾನಸಿ ಸುಧೀರ್ ಅವರ ಹಾಡುಗಳು ಕೂಡಾ ಒಂದು. ಅವರ ಏನೀ ಅದ್ಭುತವೇ ಎಂಬ ಹಾಡು ಭಾರೀ ಮೆಚ್ಚುಗೆಯನ್ನು ಪಡೆಯುವುದರ ಜೊತೆಗೆ ವೀಕ್ಷಕರ ಸಂಖ್ಯೆಯಲ್ಲಿಯೂ ಕೂಡಾ ಜನಪ್ರಿಯತೆಯನ್ನು ಸಾಧಿಸಿತು.
ಈ ಏನೀ ಅದ್ಭುತವೇ ಎಂಬ ಹಾಡನ್ನು ಬರೆದವರು ಪ್ರಸಿದ್ಧ ಕವಿ ಬಿ. ಆರ್ . ಲಕ್ಷ್ಮಣ ರಾವ್. ಸಂಗೀತ ಸಂಯೋಜಿಸಿದವರು ಶ್ರೀ ಗುರುರಾಜ ಮಾರ್ಪಳ್ಳಿ. ಇಲ್ಲಿ ಮಾನಸಿ ಸುಧೀರ್ ಅವರ ಕಂಠದ ಇಂಪಿಗಿಂತಲೂ ಅಭಿನಯವೂ ಮುಖದ ಭಾವನೆಗಳೂ ಹೆಚ್ಚು ಇಷ್ಟವಾಗುತ್ತವೆ. ಆ ಮೂಲಕ ಅವರು ತಾನೊಬ್ಬ ಉತ್ತಮ ನಟಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲಾ ಹಾಡುಗಳಲ್ಲಿಯೂ ಅವರ ಅಭಿನಯವೇ ಗಮನ ಸೆಳೆಯುತ್ತದೆ.
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ
ಭರತನಾಟ್ಯ ಪ್ರದರ್ಶನ ಮತ್ತು ಅವರು ತಮ್ಮ ಪತಿ ಸುಧೀರ್ ರಾವ್ ಕೊಡವೂರು ಅವರೊಂದಿಗೆ ನೃತ್ಯನಿಕೇತನ ಎಂಬ ಭರತನಾಟ್ಯ ಶಾಲೆಯನ್ನು ನಡೆಸುವ ನಿಬಿಡ ಕಾರ್ಯಗಳ ನಡುವೆ ಅವರ ಉಪನ್ಯಾಸಕ ವೃತ್ತಿಯೂ ಅವರು ಮೊದಲು ಕಲಿತಿದ್ದ ಸಂಗೀತವನ್ನು ಮರೆಮಾಡಿತು. ಆದರೆ ಕೊರೋನಾ ಲಾಕ್ ಡೌನ್ ಅವರ ಭರತನಾಟ್ಯ ಶಾಲೆಯ ತರಗತಿಗಳಿಗೆ ತಡೆಯುಂಟುಮಾಡಿದ್ದರಿಂದ ಅವರೊಳಗಿದ್ದ ಸಂಗೀತ ಜಾಗೃತಗೊಂಡಿತು.
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ
ಒಂದೊಂದೇ ಅದ್ಭುತವಾದ ವೀಡಿಯೋಗಳು ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗತೊಡಗಿದವು. ಲಕ್ಷ ಸಂಖ್ಯೆಯ ವೀಕ್ಷಕರನ್ನೂ ತಲುಪಿತು. ಮಾನಸಿ ಸುಧೀರ್ ಕಿರುತೆರೆ ನಟಿಯೂ ಹೌದು. ಕೆಲವು ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಒಂದು ಹಾಡು ಅವರದೇ ಚಾನೆಲ್ ನಲ್ಲಿ ನೋಡಿ.
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ
MAANASI SUDHIR….ADBHUTHA PRATHIBE.