Saturday, May 18, 2024
Homeಯಕ್ಷಗಾನನಿಜವಲ್ಲದ ಅವ್ಯವಹಾರದ ಆರೋಪ - ಯಕ್ಷಗಾನ ಕಲಾವಿದರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ 

ನಿಜವಲ್ಲದ ಅವ್ಯವಹಾರದ ಆರೋಪ – ಯಕ್ಷಗಾನ ಕಲಾವಿದರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ 

ಕೊರೋನಾ ಬಾಧಿಸುವಿಕೆಯಿಂದ ಉಂಟಾದ ಲಾಕ್ ಡೌನ್ ಸಮಯದಲ್ಲಿ ಆದಾಯವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ಯಕ್ಷಗಾನ ಕಲಾವಿದರಿಗೆ ಸರಕಾರ ಬಿಡುಗಡೆ ಮಾಡಿದ ಪರಿಹಾರ ಧನದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ನಿಜವಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಹೇಳಿದ್ದಾರೆ. ನಿಗದಿಪಡಿಸಿದ ಅರ್ಹತೆಯ ಆಧಾರದ ಮೇಲೆ ಪರಿಹಾರದ ಸಹಾಯಧನ ಬಿಡುಗಡೆ ಆಗಿದೆ. ಆದರೆ ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಕೆಲವು ಕಲಾವಿದರು ಈ ಸೌಲಭ್ಯದಿಂದ ವಂಚಿತರಾಗಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಿಗದಿಪಡಿಸಿದ ಅರ್ಹತೆಯ ಆಧಾರದ ಮೇಲೆ ಸಹಾಯಧನ ಸ್ವೀಕರಿಸಿದ ಕಲಾವಿದರಲ್ಲಿ ಆರ್ಥಿಕವಾಗಿ ಸಬಲರಾದವರೂ ಇರಬಹುದು. ಆದರೆ ಅವರಿಗೂ ಅರ್ಹತೆಯಿಂದಲೇ ಸಹಾಯಧನ ನೀಡಲಾಗಿದೆ. ಸಹಾಯಧನದಿಂದ ವಂಚಿತರಾದ ಕಲಾವಿದರು ಸೂಕ್ತ ಧಾಖಲೆ ಸಲ್ಲಿಸಿದರೆ ಅವರಿಗೂ ಪರಿಹಾರ ಧನ ನೀಡಲಾಗುವುದು ಎಂದು ಅವರು ಹೇಳಿದರು. ಯಕ್ಷಗಾನ ಕಲಾವಿದರ ವಲಯದಲ್ಲಿ ಎಲ್ಲಾ ಜಿಲ್ಲೆಗಳ ಕಲಾವಿದರಿಗೂ ಪರಿಹಾರ ಧನ ನೀಡಲಾಗಿದೆ. ಜಿಲ್ಲೆಗಳ ಆಧಾರದಲ್ಲಿ ತಾರತಮ್ಯ ಮಾಡಿಲ್ಲ. ಈಗಾಗಲೇ ಒಟ್ಟು 2000 ಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದರೂ ಸೂಕ್ತ ಧಾಖಲೆ ಮಾಹಿತಿಗಳ ಆಧಾರದ ಮೇಲೆ 1507 ಜನರಿಗೆ 30 ಲಕ್ಷಕ್ಕೂ ಹೆಚ್ಚು ಮೊತ್ತದ  ಪರಿಹಾರಧನ ವಿತರಿಸಲಾಗಿದೆ. ಇನ್ನೂ ಹಲವಾರು ಮಂದಿಗೆ ಅರ್ಜಿಯಲ್ಲಿ ಉಂಟಾದ ದೋಷದಿಂದ ಮತ್ತು ಮಾಹಿತಿಯ ಕೊರತೆಯಿಂದ ಪರಿಹಾರ ಧನ ದೊರಕಿಲ್ಲ ಎಂಬ ದೂರುಗಳು ಗಮನಕ್ಕೆ ಬಂದಿವೆ. ಅಂತಹ ಕಲಾವಿದರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಅವಕಾಶ ಸೆಪ್ಟೆಂಬರ್ 15 ರ ವರೆಗೆ ಇರುವುದೆಂದು ಶ್ರೀ ಹೆಗಡೆ ತಿಳಿಸಿದರು. ವಂಚಿತ ಕಲಾವಿದರು ಈ ದಿನಾಂಕದೊಳಗೆ ಸೂಕ್ತ ದಾಖಲೆಗಳೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಸಹಾಯಧನ ಕೊಡಿಸಲು ನೆರವಾಗುತ್ತೇವೆ ಎಂದು ಶ್ರೀ ಎಂ.ಎ. ಹೆಗಡೆ ತಿಳಿಸಿದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments