ಶ್ರೀಕೃಷ್ಣ ಪಾರಿಜಾತ, ವಸ್ತ್ರಾಪಹಾರ, ದುಶ್ಶಾಸನ ವಧೆ
ಕಟೀಲು ಮೇಳದ ಖ್ಯಾತ ಅನುಭವೀ ಕಲಾವಿದರಾದ ವಾಟೆಪಡ್ಪು ವಿಷ್ಣು ಶರ್ಮರು ಬರೆದ ಕೃತಿಯಿದು. ರಂಗದಲ್ಲಿ ಸಹ ಕಲಾವಿದರ ಜತೆ ಉತ್ತಮ ರೀತಿಯಲ್ಲಿ ಸಂಭಾಷಿಸುವ ಶ್ರೀ ವಿಷ್ಣು ಶರ್ಮರೊಂದಿಗೆ ಮೇಳದ ತಿರುಗಾಟ ನಡೆಸುವ ಅವಕಾಶ ಮತ್ತು ಭಾಗ್ಯವು ನನಗೂ ಸಿಕ್ಕಿದೆ. ರಂಗದಲ್ಲಿ ಅವರೊಂದಿಗೆ ಅಭಿನಯಿಸಿದ್ದೇನೆ, ಸಂಭಾಷಿಸಿದ್ದೇನೆ. ಆ ಕ್ಷಣಗಳನ್ನು ಅನುಭವಿಸಿ ಸಂತೋಷಪಟ್ಟಿದ್ದೇನೆ. ಅವರ ಒಡನಾಟವು ಸದಾ ನೆನಪಿನಲ್ಲಿ ಉಳಿಯುವಂತಹ ಕ್ಷಣಗಳು. ಮುಂದೆಯೂ ಆ ಅವಕಾಶವು ಬರಬಹುದೆಂದು ಭಾವಿಸುವೆ.
ಈ ಪುಸ್ತಕದಲ್ಲಿ ಶ್ರೀ ವಿಷ್ಣು ಶರ್ಮರು ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ, ದ್ರೌಪದಿ ವಸ್ತ್ರಾಪಹಾರ ಮತ್ತು ದುಶ್ಶಾಸನ ವಧೆ ಎಂಬ ನಾಲ್ಕು ಪ್ರಸಂಗಗಳಿಗೆ ಪದ್ಯ ಸಹಿತ ಸಂಭಾಷಣೆಗಳನ್ನು ಬರೆದು ನೀಡಿರುತ್ತಾರೆ. ಸರಳ ಸುಂದರವಾಗಿ ಸಂಭಾಷಣೆಗಳನ್ನು ಬರೆದಿರುತ್ತಾರೆ. ಹವ್ಯಾಸಿ ಮತ್ತು ವೃತ್ತಿ ಕಲಾವಿದರಿಗೂ ಇದು ಉಪಯುಕ್ತ ಪುಸ್ತಕವು.
ಈ ಕೃತಿಯ ಪ್ರಕಟಣೆಗೆ ಸಹಕಾರ ನೀಡಿದವರು ಶ್ರೀ ಭಾಸ್ಕರ ಆಳ್ವ, ಪನ್ಪೇವ್, ಮುಂಬಯಿ. ಇದು 2023ರಲ್ಲಿ ಬಿಡುಗಡೆಯಾಗಿತ್ತು. ಕಟೀಲು ಆರೂ ಮೇಳಗಳ ಪ್ರಥಮ ಸೇವೆಯಾಟದ ಶುಭ ದಿನದಂದು ಈ ಪುಸ್ತಕವು ಓದುಗರ ಕೈ ಸೇರಿತ್ತು.
ನೂರ ಎಪ್ಪತ್ತಾರು ಪುಟಗಳ ಈ ಪುಸ್ತಕದ ಬೆಲೆ ರೂಪಾಯಿ ನೂರ ಎಂಭತ್ತು ಮಾತ್ರ. ಮುದ್ರಕರು ಶ್ರೀ ಅನಂತ ಪ್ರಕಾಶ ಮುದ್ರಣಾಲಯ ಕಿನ್ನಿಗೋಳಿ. ಈ ಪುಸ್ತಕವನ್ನು ಶ್ರೀ ಶರ್ಮರು ತಮ್ಮ ಸಹಕಲಾವಿದರಾಗಿದ್ದ ದಿವಂಗತ ಕಟೀಲು ಶ್ರೀನಿವಾಸ ರಾವ್ ( ಶೀನಯ್ಯ) ಅವರಿಗೆ ಅರ್ಪಿಸಿದ್ದಾರೆ.
ಹಿರಿಯ ಕಲಾವಿದರಾದ ಸುಣ್ಣಂಬಳ ಶ್ರೀ ವಿಶ್ವೇಶ್ವರ ಭಟ್ ಈ ಪುಸ್ತಕದ ಬಗೆಗೆ “ಪ್ರಯೋಜನ ಸಿದ್ಧಿ” ಎಂಬ ಶೀರ್ಷಿಕೆಯಡಿ ಬರೆದ ಲೇಖನವೂ ಕಟೀಲು ಮೇಳದ ಭಾಗವತರಾದ ಅಂಡಾಲ ಶ್ರೀ ದೇವೀಪ್ರಸಾದ ಶೆಟ್ಟಿ ಅವರು ಬರೆದ ಲೇಖನವೂ ಈ ಪುಸ್ತಕದಲ್ಲಿದೆ. ಸಹ ಕಲಾವಿದರೂ, ಆತ್ಮೀಯರೂ ಆದ ಶ್ರೀ ವಿಷ್ಣು ಶರ್ಮ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು.
ಪುಸ್ತಕದ ಲೇಖಕರು: ವಾಟೆಪಡ್ಪು ವಿಷ್ಣು ಶರ್ಮ
ಪೋನ್: 9901985207
~ ರವಿಶಂಕರ್ ವಳಕ್ಕುಂಜ
- ಸಹಪಾಠಿಯೊಬ್ಬನ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ನಿಂದ ಬೇಸತ್ತು ಯುವತಿ ಆತ್ಮಹತ್ಯೆ
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ

