ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನಿಹ ಇರುವ ಶ್ರೀ ಅಯ್ಯಪ್ಪ ಗುಡಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಎಡಕ್ಕಾನ ಗಣಪತಿ ಭಟ್ (79) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಅವರು ಕೆಲವು ದಿನಗಳ ಹಿಂದೆ ವಯೋಸಹಜ ಅನಾರೋಗ್ಯದಿಂದಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೆ ಅವರು ನಿನ್ನೆ (13.01.2024) ಕೊನೆಯುಸಿರೆಳೆದರು.
ಈ ಮೊದಲು ವಿದೇಶದಲ್ಲಿ (ಕುವೈತ್) ಉದ್ಯೋಗಲ್ಲಿದ್ದು ಆ ಮೇಲೆ ಸ್ವದೇಶಕ್ಕೆ ಮರಳಿದ್ದರು. ಅಪ್ಪಟ ಯಕ್ಷಗಾನ ಪ್ರೇಮಿಯಾಗಿದ್ದ ಅವರು ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ದಿ| ನಯನಕುಮಾರ್ ಅವರ ಹಿರಿಯ ಸಹೋದರ.
ಅರ್ಚಕ ವೃತ್ತಿಯನ್ನು ಬಲ್ಲವರಾಗಿದ್ದ ಎಡಕ್ಕಾನ ಗಣಪತಿ ಭಟ್ಟರು ಕೆಲವು ವರ್ಷಗಳಿಂದ ಪುತ್ತೂರಿನ ಅಯ್ಯಪ್ಪ ಗುಡಿಯಲ್ಲಿ ಅರ್ಚಕರಾಗಿ ದೇವರ ಸೇವೆಯನ್ನು ಮಾಡುತ್ತಿದ್ದರು.
ಅವರು ಪತ್ನಿ ಲಕ್ಷ್ಮಿ ಭಟ್, ಪುತ್ರ ಶ್ರೀ ರಾಜಾರಾಮ ಭಟ್, ಪುತ್ರಿಯರಾದ ಶ್ರೀಮತಿ ಸಂಧ್ಯಾ ಭಟ್, ಶ್ರೀಮತಿ ಗೀತಾ ಭಟ್ ಅವರನ್ನು ಅಗಲಿದ್ದಾರೆ.
- ರಕ್ಷಣಾ ಸಚಿವಾಲಯದ ಅಧಿಕಾರಿಯಾಗಿದ್ದ ಹಾಗೂ ಮೂರು ತಿಂಗಳ ಗರ್ಭಿಣಿಯಾಗಿದ್ದ ಯುವತಿಯ ಅಕಾಲಿಕ ಸಾವು; ಅತ್ತೆ-ಮಾವಂದಿರ ವಿರುದ್ಧ ತನಿಖೆ
- ಗರ್ಭಪಾತದ ನಂತರ 3 ತಿಂಗಳ ಭ್ರೂಣವನ್ನು ಬಾತ್ರೂಮ್ ಕಿಟಕಿಯಿಂದ ಹೊರಗೆ ಎಸೆದ ಯುವತಿ
- ಸಹಪಾಠಿಯೊಬ್ಬನ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ನಿಂದ ಬೇಸತ್ತು ಯುವತಿ ಆತ್ಮಹತ್ಯೆ
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ

