ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನಿಹ ಇರುವ ಶ್ರೀ ಅಯ್ಯಪ್ಪ ಗುಡಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಎಡಕ್ಕಾನ ಗಣಪತಿ ಭಟ್ (79) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಅವರು ಕೆಲವು ದಿನಗಳ ಹಿಂದೆ ವಯೋಸಹಜ ಅನಾರೋಗ್ಯದಿಂದಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೆ ಅವರು ನಿನ್ನೆ (13.01.2024) ಕೊನೆಯುಸಿರೆಳೆದರು.
ಈ ಮೊದಲು ವಿದೇಶದಲ್ಲಿ (ಕುವೈತ್) ಉದ್ಯೋಗಲ್ಲಿದ್ದು ಆ ಮೇಲೆ ಸ್ವದೇಶಕ್ಕೆ ಮರಳಿದ್ದರು. ಅಪ್ಪಟ ಯಕ್ಷಗಾನ ಪ್ರೇಮಿಯಾಗಿದ್ದ ಅವರು ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ದಿ| ನಯನಕುಮಾರ್ ಅವರ ಹಿರಿಯ ಸಹೋದರ.
ಅರ್ಚಕ ವೃತ್ತಿಯನ್ನು ಬಲ್ಲವರಾಗಿದ್ದ ಎಡಕ್ಕಾನ ಗಣಪತಿ ಭಟ್ಟರು ಕೆಲವು ವರ್ಷಗಳಿಂದ ಪುತ್ತೂರಿನ ಅಯ್ಯಪ್ಪ ಗುಡಿಯಲ್ಲಿ ಅರ್ಚಕರಾಗಿ ದೇವರ ಸೇವೆಯನ್ನು ಮಾಡುತ್ತಿದ್ದರು.
ಅವರು ಪತ್ನಿ ಲಕ್ಷ್ಮಿ ಭಟ್, ಪುತ್ರ ಶ್ರೀ ರಾಜಾರಾಮ ಭಟ್, ಪುತ್ರಿಯರಾದ ಶ್ರೀಮತಿ ಸಂಧ್ಯಾ ಭಟ್, ಶ್ರೀಮತಿ ಗೀತಾ ಭಟ್ ಅವರನ್ನು ಅಗಲಿದ್ದಾರೆ.
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

