9-12-2022 ರಂದು ಸೀಮಾ ಶುಲ್ಕ, ಬೆಂಗಳೂರು ವಲಯ (customs, bangalore zone) ಸೀಮಾ ಶುಲ್ಕ ಕಾಯಿದೆ 1962, 60 ರ ಸಂಭ್ರಮಾಚರಣೆಯಲ್ಲಿ ಯಕ್ಷದೇಗುಲ ಬೆಂಗಳೂರು ತಂಡದವರಿಂದ ಬಹು ಜನರ ಅಪೇಕ್ಷೆ ಮೇರೆಗೆ 1500ಕ್ಕೂ ಹೆಚ್ಚು ಪ್ರದರ್ಶನ ಕಂಡ “ಇಳೆಯಣ್ಣನ ಕತೆ” ಯಕ್ಷಗಾನ ಪ್ರದರ್ಶನ ನಡೆಯಿತು.
ಹಿರಿಯ ರಂಗಕರ್ಮಿ ಗೋಪಾಲ ಕೃಷ್ಣ ನಾಯರಿ ಯವರು ಹಿಂದಿಯ “ಏಕ್ ಚಿಟ್ಟಿ” ಕಿರು ನಾಟಕವನ್ನು ಕನ್ನಡಕ್ಕೆ ಇಳೆಯಣ್ಣನ ಕತೆ ಎನ್ನುವ ಯಕ್ಷಗಾನ ಪ್ರಸಂಗವಾಗಿ ರಚಿಸಿದರು.
ಪ್ರಸಂಗವನ್ನು ಕೆ.ಮೋಹನ್ ನಿರ್ದೇಶಿಸಿ ಈಗ 1500 ಕ್ಕೂ ಹೆಚ್ಚು ಪ್ರದರ್ಶನ ಕಂಡು ನೂರಾರು ಕಲಾವಿದರು ಈ ಪ್ರಸಂಗದಲ್ಲಿ ವೇಷ ಮಾಡಿರುವುದು ಹೆಮ್ಮೇಯ ವಿಚಾರ. ನಿನ್ನೆಯ ಕಾರ್ಯಕ್ರಮ customs ವಿಚಾರದ ಬಗ್ಗೆ ನಡೆದಿದ್ದು, ಪ್ರಿಯಾಂಕ ಕೆ ಮೋಹನ್ ನಿರ್ದೇಶನ ನೀಡಿ,ಸುದರ್ಶನ ಉರಾಳರು ಸಂಯೋಜನೆ ಮಾಡಿದರು.
ಕಲಾವಿದರಾಗಿ ಸುಬ್ರಹ್ಮಣ್ಯ ಹೊಳ್ಳ, ಕಾರ್ತಿಕ ದಾರೇಶ್ವರ, ಶ್ರೀಧರ,ವಿಶ್ವನಾಥ ಶೆಟ್ಟಿ, ಶಶಾಂಕ ಕಾಶಿ, ಬಾಲಕೃಷ್ಣ ಭಟ್, ತಮ್ಮಣ್ಣ ಗಾಂವ್ಕರ್, ಶ್ರೀವತ್ಸ ಇನ್ನೀತರು ಭಾಗವಹಿಸಿದರು.
- 7th Standard, English – Unit 1 Prose – A Tiger in the House
- 7th Standard, Social – HISTORY CHAPTER 1 – MAJOR DEVELOPMENTS IN THE WORLD
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH