ಇಂದು (5-10-2022) ಮಧ್ಯರಾತ್ರಿ 12 ಘಂಟೆಯಿಂದ ನಾಳೆ ಬೆಳಗ್ಗೆ 10 ಘಂಟೆಯವರೆಗೆ ಕೊಲ್ಲಂಗಾನ ಕ್ಷೇತ್ರದಲ್ಲಿ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ರಾಮಾಂಜನೇಯ, ವಿಶ್ವಾಮಿತ್ರ ಮೇನಕೆ, ಭಾರ್ಗವ ಪ್ರಪಂಚ ಎಂಬ ಪ್ರಸಂಗಗಳ ಪ್ರದರ್ಶನ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕೊಲ್ಲಂಗಾನ ದಶಮಿ ಯಕ್ಷೋತ್ಸವ – 2022 ರ ಅಂಗವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಮೊದಲಿಗೆ ರಾಮಾಂಜನೇಯ ಪ್ರಸಂಗವು ರಾತ್ರಿ 12 ಘಂಟೆಯಿಂದ ಮುಂಜಾನೆ 4 ಘಂಟೆಯವರೆಗೆ ನಡೆಯಲಿದೆ. ಆಮೇಲೆ ವಿಶ್ವಾಮಿತ್ರ ಮೇನಕೆ ಪ್ರಸಂಗವು ಮುಂಜಾನೆ 4 ಘಂಟೆಯಿಂದ ಬೆಳಗ್ಗೆ 6.30 ರ ವರೆಗೆ ನಡೆಯಲಿದೆ.
ಬಳಿಕ ಭಾರ್ಗವ ಪ್ರಪಂಚ ಪ್ರಸಂಗವು ಬೆಳಗ್ಗೆ 6.30 ರಿಂದ ನಾಳೆ (6.10.2022) ಬೆಳಗ್ಗೆ 10 ಘಂಟೆಯ ವರೆಗೆ ನಡೆಯಲಿದೆ. ಸಂಘಟಕರು ಮತ್ತು ಶ್ರೀ ಕ್ಷೇತ್ರ ಕೊಲ್ಲಂಗಾನ ದಶಮಿ ಯಕ್ಷೋತ್ಸವ ಸಮಿತಿಯವರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
- ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ – ಎಂಟು ಜನರ ಮೇಲೆ ಮಾನನಷ್ಟ ದೂರು ದಾಖಲಿಸಿದ ರಿಮಾ ಕಲ್ಲಿಂಗಲ್
- ಕಾಳಿಂಗ ನಾವಡ ಪ್ರಶಸ್ತಿ 2024 – ಯಾರಿಗೆ ಒಲಿಯಿತು ಅದೃಷ್ಟ?
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ