ಇಂದು (5-10-2022) ಮಧ್ಯರಾತ್ರಿ 12 ಘಂಟೆಯಿಂದ ನಾಳೆ ಬೆಳಗ್ಗೆ 10 ಘಂಟೆಯವರೆಗೆ ಕೊಲ್ಲಂಗಾನ ಕ್ಷೇತ್ರದಲ್ಲಿ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ರಾಮಾಂಜನೇಯ, ವಿಶ್ವಾಮಿತ್ರ ಮೇನಕೆ, ಭಾರ್ಗವ ಪ್ರಪಂಚ ಎಂಬ ಪ್ರಸಂಗಗಳ ಪ್ರದರ್ಶನ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕೊಲ್ಲಂಗಾನ ದಶಮಿ ಯಕ್ಷೋತ್ಸವ – 2022 ರ ಅಂಗವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಮೊದಲಿಗೆ ರಾಮಾಂಜನೇಯ ಪ್ರಸಂಗವು ರಾತ್ರಿ 12 ಘಂಟೆಯಿಂದ ಮುಂಜಾನೆ 4 ಘಂಟೆಯವರೆಗೆ ನಡೆಯಲಿದೆ. ಆಮೇಲೆ ವಿಶ್ವಾಮಿತ್ರ ಮೇನಕೆ ಪ್ರಸಂಗವು ಮುಂಜಾನೆ 4 ಘಂಟೆಯಿಂದ ಬೆಳಗ್ಗೆ 6.30 ರ ವರೆಗೆ ನಡೆಯಲಿದೆ.
ಬಳಿಕ ಭಾರ್ಗವ ಪ್ರಪಂಚ ಪ್ರಸಂಗವು ಬೆಳಗ್ಗೆ 6.30 ರಿಂದ ನಾಳೆ (6.10.2022) ಬೆಳಗ್ಗೆ 10 ಘಂಟೆಯ ವರೆಗೆ ನಡೆಯಲಿದೆ. ಸಂಘಟಕರು ಮತ್ತು ಶ್ರೀ ಕ್ಷೇತ್ರ ಕೊಲ್ಲಂಗಾನ ದಶಮಿ ಯಕ್ಷೋತ್ಸವ ಸಮಿತಿಯವರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

