ತಮ್ಮ ಮನೆಯ ಹೊರಗಡೆ ಮಂಚ ಹಾಕಿ ಮಲಗಿದ್ದ ಮಹಿಳೆಯೊಬ್ಬರು ನಾಗರಹಾವು ಕಡಿತದಿಂದ ಪಾರಾಗಿದ್ದಾರೆ. ಅವಳ ಮೇಲೆ ಹತ್ತಿದ ನಾಗರಹಾವು ಸ್ವಲ್ಪ ಹೊತ್ತು ದೇಹದ ಮೇಲೆ ಹೆಡೆಯೆತ್ತಿ ನಿಂತು ಆಮೇಲೆ ಹೊರಟುಹೋಯಿತು.
ಕರ್ನಾಟಕದ ಕಲಬುರಿಗಿ ಜಿಲ್ಲೆಯ ಮಲ್ಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಫೋನ್ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ವೈರಲ್ ಆಗಿದೆ.
ಮನೆಯ ಹೊರಗಡೆ ಕೃಷಿಭೂಮಿಯಲ್ಲಿ ಹಾಕಿದ್ದ ಹಾಸಿಗೆಯ ಮೇಲೆ ಮಹಿಳೆ ಮಲಗಿದ್ದಾಗ ನಾಗರ ಹಾವು ಆಕೆಯ ಮೇಲೆ ಹತ್ತಿ ಹೆಡೆಯೆತ್ತಿ ನೋಡುತ್ತಿತ್ತು.. ಹಾವಿನ ಚಲನವಲನದಿಂದ ಎಚ್ಚೆತ್ತುಕೊಂಡ ಮಹಿಳೆ ಮಲಗಿದ್ದ ನಾಗನನ್ನು ಕಂಡು ಕದಲದೆ ಸುಮ್ಮನಾದರು.
ತನ್ನನ್ನು ಈ ಅಪಾಯದಿಂದ ಪಾರು ಮಾಡುವಂತೆ ದೇವರಲ್ಲಿ ಬೇಡಿಕೊಂಡಳು. ಮಹಿಳೆ ಬೊಬ್ಬೆ ಹೊಡೆಯುತ್ತಿರುವುದನ್ನು ಕಂಡ ಗಂಡ ಮತ್ತು ಮಕ್ಕಳು ಬೊಬ್ಬೆ ಹೊಡೆದು ಹಾವನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಇದರಿಂದ ವಿಚಲಿತಗೊಂಡ ನಾಗರಹಾವು ಹೆಡೆಯೆತ್ತಿ ಬುಸುಗುಡುತ್ತಿತ್ತು.
ಗಂಡ ಮತ್ತು ಮಕ್ಕಳು ಮನೆಯೊಳಗೆ ಮರೆಯಾದ ಮೇಲೆ ಹಾವು ಅದರ ಪಾಡಿಗೆ ಹೊರತು ಹೋಯಿತು. ಸ್ವಲ್ಪ ಹೊತ್ತಿನವರೆಗೆ ಹಾಸಿಗೆಯ ಮೇಲೆ ಮಲಗಿದ್ದ ಹಾವು ಮಹಿಳೆಗೆ ಯಾವುದೇ ತೊಂದರೆಯಾಗದಂತೆ ಹೊರಟು ಹೋಗಿದೆ.
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್

