ಮದುವೆಯ ಆರತಕ್ಷತೆಯ ಸಂಭ್ರಮದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಮದುವೆಯ ಆರತಕ್ಷತೆಯ ಮಧ್ಯೆಯೇ ಮದುಮಗ ಎದೆನೋವಿನಿಂದ ಪ್ರಾಣಬಿಟ್ಟಿದ್ದಾನೆ.
ಇದು ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆ. ಹೊನ್ನೂರಸ್ವಾಮಿ (26) ಎಂಬ ಯುವಕನೇ ಮೃತಪಟ್ಟ ಮದುಮಗ.
ಮದುವೆಯ ಸಂಭ್ರಮದಲ್ಲಿದ್ದ ಮದುಮಗ ಹೊನ್ನೂರಸ್ವಾಮಿಗೆ ವೇದಿಕೆಯಲ್ಲಿರುವಾಗಲೇ ಎದೆನೋವು ಬಂದಿದೆ. ಆತನ ಚಡಪಡಿಕೆಯನ್ನು ಕಂಡ ಸಂಬಂಧಿಕರು ಸುಮ್ಮನೆ ನಿಲ್ಲುವಂತೆ ಹೇಳಿದ್ದಾರೆ.
ತನ್ನ ಸಹೋದರನ ಬಳಿ ಎದೆನೋವಾಗುತ್ತಿದೆ ಎಂದು ಆತನು ತಿಳಿಸಿದಾಗ ಕುಡಿಯಲು ಪಾನೀಯ ತಂದುಕೊಟ್ಟರು. ಅದನ್ನು ಕುಡಿದ ಕೂಡಲೇ ವಾಂತಿ ಮಾಡಿದ ಹೊನ್ನೂರಸ್ವಾಮಿ ಅಸ್ವಸ್ಥನಾಗಿದ್ದಾನೆ.
ಕೂಡಲೇ ಹೊಸಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಹೊನ್ನೂರಸ್ವಾಮಿ ಮಾರ್ಗಮಧ್ಯೆಯೇ ಅಸುನೀಗಿದ್ದಾನೆಂದು ತಿಳಿದುಬಂದಿದೆ.
- ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮದರಸಾದಲ್ಲಿ ಉರ್ದು ಕಲಿಸುತ್ತಿದ್ದ ಶಿಕ್ಷಕ
- 50 ವರ್ಷಗಳ ನಂತರ ಮತ್ತೆ ಅವಾಂತರ ಸೃಷ್ಟಿಸಿದ ‘ಕೋಸಿ’ ನದಿ – ಉತ್ತರ ಬಿಹಾರ ಪ್ರವಾಹದಲ್ಲಿ ಮುಳುಗಡೆಯಾಗುವ ಭೀತಿ, ಮನೆ ಬಿಟ್ಟು ಹೋಗುತ್ತಿರುವ ಜನ
- ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿರಿಬಾಗಿಲು ಪ್ರತಿಷ್ಠಾನಕ್ಕೆ 15 ಲಕ್ಷ ರೂಪಾಯಿಗಳ ಕೊಡುಗೆ
- ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ – ಇಸ್ರೇಲ್ ಅಧಿಕೃತ ಹೇಳಿಕೆ
- ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ಪುತ್ತೂರಿನಲ್ಲಿ ದೂರು ದಾಖಲು – ಹಿಂದೂ ಧರ್ಮಕ್ಕೆ ಅವಮಾನ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹ