ಮದುವೆಯ ಆರತಕ್ಷತೆಯ ಸಂಭ್ರಮದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಮದುವೆಯ ಆರತಕ್ಷತೆಯ ಮಧ್ಯೆಯೇ ಮದುಮಗ ಎದೆನೋವಿನಿಂದ ಪ್ರಾಣಬಿಟ್ಟಿದ್ದಾನೆ.
ಇದು ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆ. ಹೊನ್ನೂರಸ್ವಾಮಿ (26) ಎಂಬ ಯುವಕನೇ ಮೃತಪಟ್ಟ ಮದುಮಗ.
ಮದುವೆಯ ಸಂಭ್ರಮದಲ್ಲಿದ್ದ ಮದುಮಗ ಹೊನ್ನೂರಸ್ವಾಮಿಗೆ ವೇದಿಕೆಯಲ್ಲಿರುವಾಗಲೇ ಎದೆನೋವು ಬಂದಿದೆ. ಆತನ ಚಡಪಡಿಕೆಯನ್ನು ಕಂಡ ಸಂಬಂಧಿಕರು ಸುಮ್ಮನೆ ನಿಲ್ಲುವಂತೆ ಹೇಳಿದ್ದಾರೆ.
ತನ್ನ ಸಹೋದರನ ಬಳಿ ಎದೆನೋವಾಗುತ್ತಿದೆ ಎಂದು ಆತನು ತಿಳಿಸಿದಾಗ ಕುಡಿಯಲು ಪಾನೀಯ ತಂದುಕೊಟ್ಟರು. ಅದನ್ನು ಕುಡಿದ ಕೂಡಲೇ ವಾಂತಿ ಮಾಡಿದ ಹೊನ್ನೂರಸ್ವಾಮಿ ಅಸ್ವಸ್ಥನಾಗಿದ್ದಾನೆ.
ಕೂಡಲೇ ಹೊಸಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಹೊನ್ನೂರಸ್ವಾಮಿ ಮಾರ್ಗಮಧ್ಯೆಯೇ ಅಸುನೀಗಿದ್ದಾನೆಂದು ತಿಳಿದುಬಂದಿದೆ.
- ಇಮ್ರಾನ್ ಖಾನ್ ಜೀವಂತವಾಗಿದ್ದಾರೆಯೇ? ಜೈಲಿನಲ್ಲಿಯೇ ಸಾವಿನ ಸಂದೇಹ
- ನೆಟ್ಫ್ಲಿಕ್ಸ್ನ ‘ಲವ್ ಈಸ್ ಬ್ಲೈಂಡ್’ (Love Is Blind) ಈಗ ಬಹು ಜನಪ್ರಿಯ
- 3.7 ಮಿಲಿಯನ್ ಪೌಂಡ್ (47 ಕೋಟಿ ರೂಪಾಯಿ) ಮೌಲ್ಯದ ಫೆರಾರಿ ಕಾರು ಪೊಲೀಸ್ ಕಾರ್ಯಾಚರಣೆಯಲ್ಲಿ ವಶಕ್ಕೆ
- ಉಜಿರೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿ – ಯುವಕ ಸಾವು: UJIRE
- ಒಂದೇ ದೋಣಿಯಲ್ಲಿ ಕುಳಿತು ಇಂಗ್ಲಿಷ್ ಕಾಲುವೆಯನ್ನು ದಾಟಿದ 230 ಜನರು!

