ಹಿರಿಯ ಹಿಮ್ಮೇಳವಾದಕ ಮಿಜಾರು ಮೋಹನ ಶೆಟ್ಟಿಗಾರರು ಕಟೀಲು, ಕರ್ನಾಟಕ ಮೇಳವೂ ಸೇರಿದಂತೆ ಸುದೀರ್ಘ ಐದು ದಶಕಗಳ ಕಲಾ ಸೇವೆಗೈದಿದ್ದು ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ವೃತ್ತಿಯಲ್ಲಿರುವಾಗಲೂ ಮಾಡುತ್ತಿದ್ದ ಕುಲಕಸುಬು ನೇಕಾರಿಕೆಯನ್ನು ಈಗಲೂ ಪತಿ-ಪತ್ನಿಯರಿಬ್ಬರೂ ದಿನದ ಒಂದಷ್ಟು ಹೊತ್ತು ಮಾಡುತ್ತಾರೆ.
ಕಟೀಲು ಮೇಳದಲ್ಲಿ ತಾವು ಎಳವೆಯಲ್ಲಿದ್ದಾಗ ಅನುಭವಿಸಿದ ಕರ್ಣಾನಂದಕರ ಹಿಮ್ಮೇಳದ ನೆನಪಿನಲ್ಲಿ ಅತ್ತೂರು ಉಡುಪ ಸಹೋದರ-ಸಹೋದರಿಯರ ಪರವಾಗಿ ರೂ. 20,000/- ನಗದು ಪುರಸ್ಕಾರವೂ ಸೇರಿದಂತೆ ಫಲವಸ್ತು ಅಭಿನಂದನಾ ಪತ್ರದೊಂದಿಗೆ ಶೆಟ್ಟಿಗಾರ್ ದಂಪತಿಗಳನ್ನು ಅವರ ಮನೆಯಲ್ಲಿ ಗೌರವಿಸಲಾಯಿತು.
ಕಲಾವಿದ-ಪ್ರೇಕ್ಷಕರ ನಡುವಿನ ಮಧುರ ಸಂಬಂಧಕ್ಕೆ ಇದು ಸಾಕ್ಷಿಯಾಯಿತು. ವೃದ್ಧ ದಂಪತಿಗಳು ತುಂಬಾ ಸಂತೋಷವನ್ನು ಅನುಭವಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ, ಪ್ರಥ್ವಿ ಪ್ರಸಾದ ಉಪಸ್ಥಿತರಿದ್ದರು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
