ಹಿರಿಯ ಹಿಮ್ಮೇಳವಾದಕ ಮಿಜಾರು ಮೋಹನ ಶೆಟ್ಟಿಗಾರರು ಕಟೀಲು, ಕರ್ನಾಟಕ ಮೇಳವೂ ಸೇರಿದಂತೆ ಸುದೀರ್ಘ ಐದು ದಶಕಗಳ ಕಲಾ ಸೇವೆಗೈದಿದ್ದು ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ವೃತ್ತಿಯಲ್ಲಿರುವಾಗಲೂ ಮಾಡುತ್ತಿದ್ದ ಕುಲಕಸುಬು ನೇಕಾರಿಕೆಯನ್ನು ಈಗಲೂ ಪತಿ-ಪತ್ನಿಯರಿಬ್ಬರೂ ದಿನದ ಒಂದಷ್ಟು ಹೊತ್ತು ಮಾಡುತ್ತಾರೆ.
ಕಟೀಲು ಮೇಳದಲ್ಲಿ ತಾವು ಎಳವೆಯಲ್ಲಿದ್ದಾಗ ಅನುಭವಿಸಿದ ಕರ್ಣಾನಂದಕರ ಹಿಮ್ಮೇಳದ ನೆನಪಿನಲ್ಲಿ ಅತ್ತೂರು ಉಡುಪ ಸಹೋದರ-ಸಹೋದರಿಯರ ಪರವಾಗಿ ರೂ. 20,000/- ನಗದು ಪುರಸ್ಕಾರವೂ ಸೇರಿದಂತೆ ಫಲವಸ್ತು ಅಭಿನಂದನಾ ಪತ್ರದೊಂದಿಗೆ ಶೆಟ್ಟಿಗಾರ್ ದಂಪತಿಗಳನ್ನು ಅವರ ಮನೆಯಲ್ಲಿ ಗೌರವಿಸಲಾಯಿತು.
ಕಲಾವಿದ-ಪ್ರೇಕ್ಷಕರ ನಡುವಿನ ಮಧುರ ಸಂಬಂಧಕ್ಕೆ ಇದು ಸಾಕ್ಷಿಯಾಯಿತು. ವೃದ್ಧ ದಂಪತಿಗಳು ತುಂಬಾ ಸಂತೋಷವನ್ನು ಅನುಭವಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ, ಪ್ರಥ್ವಿ ಪ್ರಸಾದ ಉಪಸ್ಥಿತರಿದ್ದರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

