ಕಳೆದ 16 ವರ್ಷಗಳಿಂದ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸುತ್ತಾ ಬಂದ ಚಿಟ್ಟಾಣ ಸಪ್ತಾಹವು ಈ ವರ್ಷ ನವೆಂಬರ್ 5ರಿಂದ 11ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.


ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನವೆಂಬರ್ 5 ರಂದು ಸಂಜೆ 6.30 ಗಂಟೆಗೆ ಉದ್ಘಾಟಿಸಲಿದ್ದಾರೆ.
ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಪ್ರತೀ ದಿನ ಸಂಜೆ 6.30 ಗಂಟೆಗೆ ಆರಂಭವಾಗುವ ಚಿಟ್ಟಾಣ ಸಂಸ್ಮರಣಾ ಸಪ್ತಾಹದಲ್ಲಿ
ಅನುಕ್ರಮವಾಗಿ ಶ್ರೀಮತಿ ಪರಿಣಯ, ಪಟ್ಟಾಭಿಷೇಕ, ಸತ್ಯಹರಿಶ್ಚಂದ್ರ, ಧರ್ಮಾಂಗದ ಧಿಗ್ವಿಜಯ, ನೃಗರಾಜ ಚರಿತ್ರೆ, ತರಣ ಸೇನ ಕಾಳಗ, ದಕ್ಷಯಜ್ಞ ಮತ್ತು ಶ್ವೇತಕುಮಾರ ಚರಿತ್ರೆ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ತಿಳಿಸಿದ್ದಾರೆ.
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

