Friday, September 20, 2024
Homeಸುದ್ದಿರವಿಶಂಕರ್ ವಳಕ್ಕುಂಜ ಅವರು ಬರೆದ ಆರನೆಯ ಪುಸ್ತಕ 'ಯಕ್ಷಗಾನ ವಾಚಿಕ ಸಮಾರಾಧನೆ ಭಾಗ - 2'...

ರವಿಶಂಕರ್ ವಳಕ್ಕುಂಜ ಅವರು ಬರೆದ ಆರನೆಯ ಪುಸ್ತಕ ‘ಯಕ್ಷಗಾನ ವಾಚಿಕ ಸಮಾರಾಧನೆ ಭಾಗ – 2’ ಆಗಸ್ಟ್ 23ಕ್ಕೆ ಎಡನೀರು ಮಠದಲ್ಲಿ ಬಿಡುಗಡೆ

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ರವಿಶಂಕರ್ ವಳಕ್ಕುಂಜ ಅವರ ಆರನೆಯ ಕೃತಿ ‘ಯಕ್ಷಗಾನ ವಾಚಿಕ ಸಮಾರಾಧನೆ ಭಾಗ – 2’ ಆಗಸ್ಟ್ 23ಕ್ಕೆ ಎಡನೀರು ಮಠದಲ್ಲಿ ಬಿಡುಗಡೆಗೊಳ್ಳಲಿದೆ.

ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಚತುರ್ಥ ಚಾತುರ್ಮಾಸ್ಯದ ಅಂಗವಾಗಿ ಹಮ್ಮಿಕೊಂಡ ವಿವಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನಾಂಕ. 23.08.2024ನೇ ಶುಕ್ರವಾರ ಅಪರಾಹ್ನ 3 ಗಂಟೆಗೆ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಅನಂತರ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ವಿವರಗಳಿಗೆ ಚಿತ್ರವನ್ನು ನೋಡಿ.

ರವಿಶಂಕರ್ ವಳಕ್ಕುಂಜ ಅವರ ಮೊದಲ ಐದು ಕೃತಿಗಳು.

1. ಯಕ್ಷಗಾನ ವಾಚಿಕ ಸಮಾರಾಧನೆ

  1. ಯಕ್ಷಗಾನ ಪ್ರಸಂಗ ದೃಶ್ಯಾವಳೀ
  2. ಯಕ್ಷಪಾತ್ರದೀಪಿಕಾ
  3. ಯಕ್ಷಗಾನ ಪ್ರಸಂಗ ದೃಶ್ಯಾವಳೀ – ಭಾಗ ೨
  4. ಯಕ್ಷಗಾನ ಪ್ರಸಂಗಗಳಲ್ಲಿ ನಾರದ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments