‘ರಕ್ಷಾಬಂಧನ’ ಇದು ಭಾತೃತ್ವದ ಸಂದೇಶ ಸಾರುವ ಹಬ್ಬ ಈ ಸಂಭ್ರಮದ ಹಬ್ಬವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ದಿನಾಂಕ 20-08-2024 ರಂದು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾಗ್ಮಿ ಬಿ.ಗಣರಾಜ ಭಟ್ ಕೆದಿಲ, ಇವರು ಆಗಮಿಸಿದ್ದರು. ಭಾರತಮಾತೆಗೆ ಪುಷ್ಪಾರ್ಚನೆ ಗೈದು ರಕ್ಷೆಯನ್ನು ಕಟ್ಟಿ, ರಕ್ಷೆಯ ಮಹತ್ವ, ಮತ್ತು ರಕ್ಷಾ ಬಂಧನದ ಮಹತ್ವ ಅದರ ವಿಶೇಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ನುಡಿಗಳೊಂದಿಗೆ ಶುಭ ಹಾರೈಸಿದರು.


ಶಾಲಾ ಕಾರ್ಯಕ್ರಮದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಭಾಸ್ಕರ್ ಗೌಡ ಉಪಸ್ಥಿತರಿದ್ದರು.
ನಾವೆಲ್ಲ ಹಿಂದು, ನಾವೆಲ್ಲ ಬಂಧು ನಾವೆಲ್ಲ ಒಂದು’ ಎಂಬ ನಮ್ಮೆಲ್ಲರನ್ನು ಬೆಸೆಯುವ ಸಹೋದರತ್ವ ಪ್ರತೀಕವಾಗಿರುವ ರಕ್ಷೆಯನ್ನು ವಿದ್ಯಾರ್ಥಿಗಳೆಲ್ಲರೂ ಪರಸ್ಪರ ಕಟ್ಟಿಕೊಂಡು ಸಂಭ್ರಮಿಸಿದರು.
ಶಿಕ್ಷಕಿ ಸವಿತಾ ರಕ್ಷಾಬಂಧನಾದ ಸಂದೇಶ ವಾಚಿಸಿದರು. ಕು.ಸುಪ್ರಜಾ ರಾವ್ ವೈಯಕ್ತಿಕ ಗೀತೆ ಹಾಡಿದರು. ಶಿಕ್ಷಕಿ ಕು.ಸ್ವಾತಿ ಕಾಮತ್ ಅತಿಥಿಗಳನ್ನು ಸ್ವಾಗತಿಸಿ,
ಶ್ರೀ ವೆಂಕಟೇಶ್ ಪ್ರಸಾದ್ ಧನ್ಯವಾದಗೈದರು. ಶ್ರೀಮತಿ ಶಿವಾನಿ ಗಣಪತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲೆಯ ಶಿಕ್ಷಕ ಶಿಕ್ಷಕೇತರ ಬಂಧುಗಳು ಸಹಕರಿಸಿದರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

