‘ನಡೆದು ಬಂದ ದಾರಿ’ ಇದು ಡಾ| ಉಪ್ಪಂಗಳ ಶ್ರೀ ಶಂಕರನಾರಾಯಣ ಭಟ್ಟರ ಜೀವನ ಕಥೆಯನ್ನು ತಿಳಿಸುವ ಕೃತಿ. ಶ್ರೀಯುತರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರು.
ಕೇರಳ ರಾಜ್ಯದ ಕಾಲೇಜು ಮಟ್ಟದ ವಿದ್ಯಾಸಂಸ್ಥೆಗಳ ಉಪನಿರ್ದೇಶಕರಾಗಿಯೂ ನಿವೃತ್ತರು. ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿಯೂ ಕಲಾ ಸೇವೆಯನ್ನು ಮಾಡಿರುವವರು. ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಮಂಡಳಿಯಲ್ಲಿ ಇವರು ಸಕ್ರಿಯರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆ ಪ್ರಶಂಸನೀಯವಾದುದು. ಅನೇಕ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುತ್ತಾರೆ. ‘ನಡೆದು ಬಂದ ದಾರಿ’ ಎಂಬ ಪುಸ್ತಕವು 2022ರಲ್ಲಿ ಪ್ರಕಟವಾಗಿತ್ತು. ಈ ಕೃತಿಯ ಪ್ರಕಾಶಕರು ಮಂಗಳೂರಿನ ಆಕೃತಿ ಆಶ್ರಯ ಪಬ್ಲಿಕೇಷನ್ಸ್. ಇದು ನೂರಾ ಹದಿನಾರು ಪುಟಗಳ ಪುಸ್ತಕ. ಬೆಲೆ ರೂಪಾಯಿ ನೂರಾ ಇಪ್ಪತ್ತೈದು ಮಾತ್ರ.
ಪ್ರಕಾಶಕರಾದ ಶ್ರೀ ಕಲ್ಲೂರ ನಾಗೇಶ ಅವರು ‘ದಾರಿ ಮಾಡಿ ಕೊಟ್ಟವರು’ ಎಂಬ ಶೀರ್ಷಿಕೆಯಡಿ ಲೇಖನ ಬರೆದಿರುತ್ತಾರೆ. ‘ಓದುವ ಮೊದಲು’ ಎಂಬ ಬರಹದಡಿ ಲೇಖಕರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.
ಪುಸ್ತಕದ ಕೊನೆಯ ಭಾಗದಲ್ಲಿ ಲೇಖಕರ ಬದುಕಿನ, ಒಡನಾಡಿಗಳ, ಹಿರಿಯರ ಕಪ್ಪು ಬಿಳುಪಿನ ಚಿತ್ರಗಳನ್ನು ನೀಡಿರುತ್ತಾರೆ.
ಬರಹ: ರವಿಶಂಕರ್ ವಳಕ್ಕುಂಜ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

